ಬೆಂಗಳೂರು: ಇಂದು ಸ್ಯಾಂದಲ್ ಉಡ್ ಅಭಿನವ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಜನುಮ ದಿನ ಈ ಸಂದರ್ಭದಲ್ಲಿ 'ದಿ ವಿಲನ್' ಟೀಂಮಿನೊಂದಿಗೆ ಫೇಸ್ಬುಕ್ ಲೈವ್ಗೆ ಬಂದ ಸುದೀಪ್ ಹುಟ್ಟುಹಬ್ಬಕ್ಕಾಗಿ ಶುಭ ಕೋರಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಫೇಸ್ ಬುಕ್ ಲೈವ್ನಲ್ಲಿ ಇದೇ ಮೊದಲ ಬಾರಿಗೆ ಬಂದ ಸುದೀಪ್, 'ಹೇಗೆ ರಿಯಾಕ್ಟ್ ಮಾಡಬೇಕೆಂಬುದೇ ಗೊತ್ತಾಗ್ತ ಇಲ್ಲ' ಹೇಳಿದ್ದಲ್ಲದೆ ಕನ್ನಡದ ಇನ್ನೊಬ್ಬ ಖ್ಯಾತ ನಟ ಶಿವರಾಜ್ಕುಮಾರ್ ಅವರೊಂದಿಗೆ ಕೆಲಸ ಮಾಡಲು ಅವಕಾಶ ಕಲ್ಪಿಸಿದ ನಿರ್ದೇಶಕ ಪ್ರೇಮ್ಗೆ ಧನ್ಯವಾದ ಅರ್ಪಿಸಿದರು.
ಪ್ರತಿ ಹುಟ್ಟಹಬ್ಬಕ್ಕು ಹೊಸಬರವಸೆ ಮೂಡಿಸಿದವನೆ ನಿಜವಾದ ಸಾಧಕ!ನೂರು ಹುಟ್ಟುಹಬ್ಬವನ್ನ ನೊರು ಹೊಸಬರವಸೆ ಮೂಡಿಸಿ ಮಾದರಿಯಾಗಿ ಬಾಳಿ..ಹು.ಹ.ಶು ನಲ್ಮೆಯ ಸಹೋದರನಿಗೆ.. pic.twitter.com/z0xUDjoezB
ನಾನೀಗ ದೂರದಲ್ಲಿದ್ದೇನೆ, ಹುಟ್ಟಿದ ದಿನ ಅಭಿಮಾನಿಗಳೊಂದಿಗೆ ಇರದಿರುವುದಕ್ಕೆ ಬೇಸರವಾಗುತ್ತಿದೆ ಎಂದರು. ಆದರೆ ಇದಕ್ಕೆ ಬಲವಾದ ಕಾರಣವಿದ್ದು, ಸದ್ಯದಲ್ಲಿಯೇ ತಿಳಿಸುವುದಾಗಿಯೂ ಹೇಳಿದ್ದಾರೆ.
ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಲು ಜೆ.ಪಿ.ನಗರದ ಸುದೀಪ್ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಸೇರಿದ್ದರು. ಆದರೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲವೆಂದು ಸುದೀಪ್ ಈ ಮೊದಲೇ ಹೇಳಿದ್ದರು.
https://t.co/1dkuvpwoFV Thanks to the entire team of Raju kannada medium ,,for this wonderful gift.... Mch luv to all.