ಕೊಡಗು ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ 10 ಲಕ್ಷ ರೂ ನೀಡಿದ ಶಿವರಾಜ್ ಕುಮಾರ್

ಕೊಡುಗು ಜಿಲ್ಲೆ ಭಾರೀ ಮಳೆ, ಪ್ರವಾಹದಿಂದ ನಲುಗಿ ಹೋಗಿದ್ದು ಅಲ್ಲಿನ ನೆರೆ ಸಂತ್ರಸ್ತರಿಗೆ ರಾಜ್ಯಾದ್ಯಂತ ನಾನಾ ಕಡೆಗಳಿಂದ ಬಟ್ಟೆ, ಔಷಧ, ಆಹಾರ ಸೇರಿದಂತೆ ಅಪಾರ ನೆರವು ಹರಿದು ಬರುತ್ತಿದೆ.
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
ಬೆಂಗಳೂರು: ಕೊಡುಗು ಜಿಲ್ಲೆ ಭಾರೀ ಮಳೆ, ಪ್ರವಾಹದಿಂದ ನಲುಗಿ ಹೋಗಿದ್ದು ಅಲ್ಲಿನ ನೆರೆ ಸಂತ್ರಸ್ತರಿಗೆ ರಾಜ್ಯಾದ್ಯಂತ ನಾನಾ ಕಡೆಗಳಿಂದ ಬಟ್ಟೆ, ಔಷಧ, ಆಹಾರ ಸೇರಿದಂತೆ ಅಪಾರ ನೆರವು ಹರಿದು ಬರುತ್ತಿದೆ.
ಈ ನಡುವೆ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೆರವು ನೀಡಲಿದ್ದಾರೆ. ಇಂದು ೯ಸೋಮವಾರ) ಸಂಜೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚೆಕ್ ಹಸ್ತಾಂತರಿಸುವುದಾಗಿ ಅವರು ಹೇಳಿದ್ದಾರೆ.
ಇನ್ನು ಉತ್ತಮ ಪ್ರಜಾಕೀಯ ಪಕ್ಷದ ಸಾರಥಿ, ರಿಯಲ್ ಸ್ಟಾರ್ ಉಪೇಂದ್ರ ಸಹ ಕೊಡಗಿನ ಪ್ರವಾಹದ ಕುರಿತಂತೆ ಮಾತನಾಡಿ "ಕೊಡವರ ಅಗತ್ಯಕ್ಕೆ ಮಿಗಿಲಾಗಿ ಅಗತ್ಯ ವಸ್ತುಗಳೂ ತಲುಪಿದೆ. ಆದರೆ ಅವರ ಸಮಸ್ಯೆಗಳು ಮಾತ್ರ ಬೇರೆಯದೇ ಆಗಿದ್ದು ಸರ್ಕಾರ ಈಗಲೇ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಿ ತನ್ನ ಜವಾಬ್ದಾರಿ ಮೆರೆಯಬೇಕು" ಎಂದರು.
ಇನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಸಹ ಕೊಡವರ ಪರ ಕಾಳಜಿ ಸೂಚಿಸಿದ್ದು "ಸರ್ಕಾರದ ನೆರವಿಗಾಗಿ ಕಾಯುವುದು ಸರಿಯಲ್ಲ, ನಾವೇ ಮುಂದೆ ನಿಂತು ಕೊಡಗನ್ನು ಮರು ನಿರ್ಮಾಣ ಮಾಡುವುದು ಹೇಗೆ ಎನ್ನುವುದನ್ನು ಯೋಚಿಸಬೇಕು. ನಾವೇ ಸರ್ಕಾರದ ರೀತಿ ಕೆಲಸಕ್ಕೆ ಮುಂದಾಗಬೇಕು" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com