ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಹರಿಕೃಷ್ಣ ಅವರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಲಕ್ಷ್ಮೀ ಪಾರ್ವತಿ ಅವರು, ನಿಜಕ್ಕೂ ಅವರ ಸಾವು ನನಗೆ ಅಪಾರ ಆಘಾತವನ್ನುಂಟು ಮಾಡಿದೆ. ಹರಿಕೃಷ್ಣ ಎನ್ ಟಿಆರ್ ಮಕ್ಕಳಲ್ಲೇ ನಾನು ಅತ್ಯಂತ ಪ್ರೀತಿಸುವ ಮಗವಾಗಿದ್ದ. ಅವರ ಸಾವಿನ ವಿಚಾರ ಕೇಳಿ ನಿಜಕ್ಕೂ ಅವರ ತಂದೆಯ ಆತ್ಮ ದುಃಖಿಸುತ್ತಿರಬಹುದು ಎಂದು ಹೇಳಿದ್ದಾರೆ.