ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದು ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಮುಂಬೈನಲ್ಲಿ ಯಶ್ ಕಥೆ ಆರಂಭವಾಗುವುದರಿಂದ ಕನ್ನಡ ಆವೃತ್ತಿಗೆ ಹಾಡು ಬರೆಯುವಂತೆ ಹೇಳಿದರು. ಪರಿಸ್ಥಿತಿಯನ್ನು ವಿವರಿಸಿದ್ದರಿಂದ ಹಾಡು ಮೊದಲಿಗೆ ಹಿಂದಿಯಲ್ಲಿ ಶುರುವಾದರೆ ಉತ್ತಮ ಅಂತ ನಾನು ಬರೆಯಲು ಶುರು ಮಾಡಿದೆ. ಹಾಗೇ ಹುಟ್ಟಿಕೊಂಡಿದ್ದು ಸಲಾಂ ರಾಖಿ ಭಾಯ್ ಹಾಡು ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.