ಬೆಂಗಳೂರು: ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಸಂಗೀತ ನಿರ್ದೇಶಕ ಹಾಗೂ ನಟ ಕರಣ್ ಮಹದೇವ್ಅಲಿಯಾಸ್ ಮಂಜುನಾಥ್ ನನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.
ಕರಣ್ ಮಹದೇವ್ ಯುವತಿಯನ್ನು ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡು ಸಂಗೀತ ಹೇಳಿಕೊಡುವುದಾಗಿ ಹೇಳಿದ್ದ. ನಂತರ ಆ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ.
ಕರಣ್ ಮಹದೇವ್ ಯುವತಿಯನ್ನು ಬೆದರಿಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಈ ನಡುವೆ ಯುವತಿಗೆ ಬೇರೆ ಯುವಕನ ಜೊತೆ ಮದುವೆ ಫಿಕ್ಸ್ ಆಗಿತ್ತು. ಈ ವಿಷಯವನ್ನು ತಿಳಿದ ಮಂಜುನಾಥ್ ಯುವತಿಯ ಜೊತೆಗಿನ ವಿಡಿಯೋ ತೋರಿಸಿ ಬೆದರಿಸಿದ್ದಾನೆ.
ಈ ಸಂಬಂಧ ಯುವತಿ ಕರಣ್ ಮಹದೇವ್ ವಿರುದ್ಧ ನವೆಂಬರ್ 27 ರಂದು ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಜ್ಞಾನಭಾರತಿ ಪೊಲೀಸರು ಆರೋಪಿ ಕರಣ್ ಮಹಾದೇವ್ನನ್ನು ಬಂಧಿಸಿದ್ದಾರೆ.
ಕರಣ್ ಮಹದೇವ್ ‘ಗೂಳಿಹಟ್ಟಿ’ ಸಿನಿಮಾ ಸೇರಿದಂತೆ ಹಲವು ಕನ್ನಡ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾನೆ.