ಚಿತ್ರದಲ್ಲಿ ಕಲಾವಿದರ ಆಯ್ಕೆ ಅಂತಿಮ ಮಾಡಿದ ನಂತರ ಇತರ ತಂತ್ರಜ್ಞರ ಹೆಸರುಗಳನ್ನು ತಂಡ ಘೋಷಣೆ ಮಾಡಲಿದೆ. ಚಿತ್ರದ ನಾಯಕಿಗೆ ಕನ್ನಡತಿಯನ್ನೇ ಆಯ್ಕೆ ಮಾಡಲಿದೆಯಂತೆ. ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮ ಮೊದಲಾದ ಹಿಟ್ ಚಿತ್ರಗಳನ್ನು ನೀಡಿದ ಅಭಿಷೇಕ್ ಗೌಡ ಅವರನ್ನು ಸ್ಯಾಂಡಲ್ ವುಡ್ ಗೆ ನಾಯಕನಾಗಿ ಪರಿಚಯಿಸುತ್ತಿರುವ ಪವನ್ ಒಡೆಯರ್ ಗೆ ಇದು ಸವಾಲಿನ ಮತ್ತು ಕುತೂಹಲದ ಸಿನಿಮಾವಾಗಿದೆಯಂತೆ.