ಮಫ್ತಿ ಚಿತ್ರದ ಯಶಸ್ವಿನ ಬಳಿಕ ಶ್ರೀಮುರಳಿ ತಮ್ಮ ಮುಂದಿನ ಯೋಜನೆ ಬಗ್ಗೆ ಹೆಚ್ಚು ಜಾಗೃತೆ ವಹಿಸಿದ್ದಾರೆ.
ಈ ಬಗ್ಗೆ ಸ್ವತಃ ಶ್ರೀಮುರಳಿ ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ. ಮಫ್ತಿ ಚಿತ್ರದ ನಂತರ ನನ್ನ ಮುಂದಿನ ಯೋಜನೆ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಿದ್ದೇನೆ ಹೊರತು ಗೊಂದಲಕ್ಕೀಡಾಗಿಲ್ಲ. ಸದ್ಯ ಎರಡು ಯೋಜನೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದರು.
ಬ್ಯಾಕ್ ಟು ಬ್ಯಾಕ್ ಚಿತ್ರಗಳ ಯಶಸ್ಸಿನ ಹಾದಿಯಲ್ಲಿರುವ ಶ್ರೀಮುರಳಿ ತಮ್ಮ ಮುಂದಿನ ಚಿತ್ರಕ್ಕಾಗಿ ಹೆಚ್ಚು ಜಾಗೃತೆ ವಹಿಸಿದ್ದಾರಂತೆ. ಕಳೆದ ಕೆಲ ತಿಂಗಳುಗಳಿಂದ ಸುಮಾರು 25ಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದೇನೆ.
ಇವುಗಳಲ್ಲಿ ಒಂದು ಕಥೆ ಇಷ್ಟವಾಗಿದೆ. ಆ ಕಥೆಯನ್ನು ಬೆಳ್ಳಿಪರದೆ ಮೇಲೆ ಹೇಗೆ ಬಿಂಬಿಸುತ್ತಾರೆ ಎಂಬುದು ತಿಳಿದ ನಂತರ ಅದೇ ಕಥೆಯನ್ನು ಅಂತಿಮಗೊಳಿಸುವುದಾಗಿ ಶ್ರೀಮುರಳಿ ಹೇಳಿದ್ದಾರೆ.
ಶೀಘ್ರದಲ್ಲೇ ತಮ್ಮ ಮುಂದಿನ ಯೋಜನೆಯನ್ನು ಅಂತಿಮಗೊಳಿಸಿ ಇನ್ನು ಹತ್ತು ದಿನದಲ್ಲಿ ಅಧಿಕೃತವಾಗಿ ಘೋಷಿಸುತ್ತೇನೆ ಎಂದರು.
ನವನಿರ್ದೇಶಕ ನರ್ತನ್ ತಮ್ಮ ಮೊದಲ ಪ್ರಯತ್ನದಲ್ಲೇ ಸೂಪರ್ ಹಿಟ್ ಮಫ್ತಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶ್ರೀಮುರಳಿ ಮತ್ತು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಮಫ್ತಿ ಚಿತ್ರ 50 ದಿನಗಳನ್ನು ಪೂರೈಸಿದೆ.