ಪ್ರಕಾಶ್ ರೈ ಆಗಲಿ, ರಜನಿಕಾಂತ್ ಆಗಲಿ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಹೇಳಿಕೆ ನೀಡುವಾಗ ಯೋಚಿಸಿ ಮಾತನಾಡಬೇಕು. ರಜನಿಕಾಂತ್ ಪ್ರೀತಿಯಿಂದ ಮಾತನಾಡಬೇಕಿತ್ತು. ಆಗ ಕನ್ನಡಿಗರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಕಾವೇರಿ ನದಿ ನೀರು ಎರಡೂ ರಾಜ್ಯದವರಿಗೆ ಅನಿವಾರ್ಯ. ಹಾಗಾಗಿ ಪ್ರಕಾಶ್ ರೈ ಮತ್ತು ರಜನಿಕಾಂತ್ ಇಬ್ಬರೂ ಸೌಜನ್ಯದಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಹೇಳಬೇಕಿತ್ತು ಎಂದು ಸಾ.ರಾ. ಗೋವಿಂದು ಅಭಿಪ್ರಾಯ ಪಟ್ಟಿದ್ದಾರೆ.