ರುಸ್ತುಂ ನಲ್ಲಿ ಶಿವಣ್ಣನಿಗೆ ಶ್ರದ್ಧಾ ಶ್ರೀನಾಥ್ ನಾಯಕಿ!

ಸ್ಟಂಟ್ ಮಾಸ್ಟರ್ ಆಗಿದ್ದ ರವಿವರ್ಮಾ ಶಿವಣ್ಣ ಅಭಿನಯದ ರುಸ್ತು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ, .ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ದಿನವಾದ ಎಪ್ರಿಲ್ 24 ರಂದು ....
ಶ್ರದ್ಧಾ ಶ್ರೀನಾಥ್
ಶ್ರದ್ಧಾ ಶ್ರೀನಾಥ್
Updated on
ಬೆಂಗಳೂರು: ಸ್ಟಂಟ್ ಮಾಸ್ಟರ್ ಆಗಿದ್ದ ರವಿವರ್ಮಾ  ಶಿವಣ್ಣ ಅಭಿನಯದ ರುಸ್ತು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ, .ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ದಿನವಾದ ಎಪ್ರಿಲ್ 24 ರಂದು ಸಿನಿಮಾದ ಮೂಹೂರ್ತ ನಡೆಯಲಿದೆ.
ರುಸ್ತುಂ ಸಿನಿಮಾದಲ್ಲಿ ಯೂ ಟರ್ನ್ ನಾಯಕಿ ಶ್ರದ್ಧಾ ಶ್ರೀನಾಥ್  ಶಿವಣ್ಣನ ಹೀರೋಯಿನ್ ಆಗಿ ನಟಿಸಲಿದ್ದಾರೆ ಎಂದು ಕೇಳಿ ಬರುತ್ತಿದೆ.ಆಪರೇಷನ್ ಅಲಮೇಲಮ್ಮ ನಂತರ ಶ್ರದ್ಧಾ ಶ್ರೀನಾಥ್ ಮತ್ತೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ,  ರುಸ್ತುಂ ಸಿನಿಮಾ ಕಥೆ ಕೇಳಿ, ಶ್ರದ್ಧಾ ಕೂಡ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಶ್ರದ್ಧಾ ಶ್ರೀನಾಥ್ ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ,ಇನ್ನೂ ಶ್ರದ್ಧಾ ಶ್ರೀನಾಥ್ ಶಿವಣ್ಣನಿಗೆ ನಾಯಕಿಯಾಗಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಖುಷಿಯ ವಿಷಯವಾಗಿದೆ, 
ಇನ್ನೂ ರುಸ್ತುಂ ಸಿನಿಮಾಗೆ ಅನಿಲ್ ಕುಮಾರ್,  ಮನೋಜ್ ಬಾಜಪೇಯಿ, ಸಂಜಯ್ ದತ್ ಅಥವಾ ಸುನೀಲ್ ಶೆಟ್ಟಿ ಅವರನ್ನು ಕರೆ ತರಲು ರವಿ ವರ್ಮಾ ಪ್ರಯತ್ನಿಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com