ಬೆಂಗಳೂರು: ವಿನಾಶಕಾರಿ ಪ್ರವಾಹದ ಕಾರಣದಿಂದ ಬಾಲಿವುಡ್ ಬಯೋಪಿಕ್ 'ಶಕೀಲಾ' ಚಿತ್ರದ ಚಿತ್ರೀಕರಣವನ್ನು ಕೇರಳದಿಂದ ಕರ್ನಾಟಕಕ್ಕೆ ಸ್ಥಳಾಂತರಿಸಿದ್ದರಿಂದ ಕರ್ನಾಟಕದಲ್ಲಿ ಎಷ್ಟೋ ಗೊತ್ತಿಲ್ಲದ ಅನೇಕ ಸ್ಥಳಗಳನ್ನು ಪತ್ತೆ ಹಚ್ಚಲು ಅವಕಾಶವಾಯಿತು ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳುತ್ತಾರೆ.
ರಿಚಾ ಛಾಡ್ಡಾ ಅಭಿನಯಿಸುತ್ತಿರುವ ಶಕೀಲಾ , ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿನ ನೀಲಿ ತಾರೆ ಎಂದೇ ಹಣೆಪಟ್ಟಿ ಕಟ್ಟಿಕೊಂಡಿದ್ದ ಶಕೀಲಾ ಜೀವನ ಚರಿತ್ರೆ ಕುರಿತಾದ್ದಾಗಿದೆ.
ಕಥೆ ಹಾಗೂ ಚಿತ್ರೀಕರಣದ ಸ್ಥಳಗಳನ್ನು ಈ ಹಿಂದೆಯೇ ಪೂರ್ಣಗೊಳಿಸಲಾಗಿತ್ತು. ಅದು ನಿತ್ಯ ಕೂಡಾ ನಡೆಯುತ್ತಿರುತ್ತದೆ. ಕೇರಳದಲ್ಲಿ ಮಳೆ ಕಾರಣದಿಂದಾಗಿ ಕೂಡಲೇ ಚಿತ್ರೀಕರಣವನ್ನು ಬದಲಾವಣೆ ಮಾಡಬೇಕಾಗಿದ್ದರಿಂದ ತುಂಬಾ ಕಷ್ಟವಾಯಿತು ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಆದರೆ, ಕರ್ನಾಟದಲ್ಲಿ ಇನ್ನೂ ಗೊತ್ತಿಲ್ಲದ ಅನೇಕ ಸ್ಥಳಗಳಿವೆ . ಇಂತಹ ಸ್ಥಳಗಳ ಹುಡುಕಾಟ ನಡೆಸಲು ಕೇರಳ ನೆರವಾಯಿತು . ಕಥೆ ಏನನ್ನೂ ಹೇಳುತ್ತದೆಯೋ ಆ ರೀತಿಯ ಸ್ಥಳಗಳನ್ನು ಪತ್ತೆ ಮಾಡಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಇಂದ್ರಜಿತ್ ತಿಳಿಸಿದರು.
Advertisement