ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ಕಿಡಿಗೇಡಿಗಳಿಂದ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಚೆನ್ನೈನ ಅಭಿರಾಮಪುರದಲ್ಲಿರುವ ಮಣಿರತ್ನಂ ಅವರ ನಿವಾಸಕ್ಕೆ ಪೊಲೀಸರು ದೌಡಾಯಿಸಿದ್ದಾರೆ.
ಈ ಸಂಬಂಧ ನಿರ್ದೇಶಕ ಮಣಿರತ್ನಂ ದೂರು ದಾಖಲಿಸಿದ್ದಾರೆ.
ಬಾಂಬ್ಸ್ಕ್ವಾಡ್ಮನೆಯನ್ನು ಪರಿಶೀಲನೆ ಮಾಡಿದ್ದು, ಅವರ ಮನೆ ಹಾಗೂ ಕಚೇರಿಗೆ ಭದ್ರತೆ ಹೆಚ್ಚಿಸಲಾಗಿದೆ.
ಮಣಿರತ್ನಂ ಅವರ ಇತ್ತೀಚಿನ ಚೆಕ್ಕ ಚೀವಂತ ವಾನಂ ಚಿತ್ರದಲ್ಲಿನ ವಿವಾದಾತ್ಮಕ ಸಂಭಾಷಣೆಯೇ ಈ ಬಾಂಬ್ ಬೆದರಿಕೆಗೆ ಕಾರಣ ಎಂದು ಹೇಳಲಾಗಿದೆ. ಈ ಸಿನಿಮಾದಲ್ಲಿನ ಕೆಲವು ವಿವಾದಾತ್ಮಕ ಸಂಭಾಷಣೆಗಳನ್ನು ತೆಗೆದು ಹಾಕಬೇಕೆಂದು ಬೆದರಿಕೆ ಹಾಕಲಾಗಿದೆ.
ಸೆಪ್ಟಂಬರ್ 28 ರಂದು ಬಿಡುಗಡೆಯಾದ ಚೆಕ್ಕ ಚೀವಂತ ವಾನಂ ಚಿತ್ರದಲ್ಲಿ ನಟರಾದ ಅರವಿಂದ ಸ್ವಾಮಿ, ಸಿಂಬು ವಿಜಯ್ ಸೇತುಪತಿ, ಅರುಣ್ ವಿಜಯ್, ಜ್ಯೋತಿಕಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ..