ತಿರುವನಂತಪುರ: ವಾಹನ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಲಯಾಳಿ ಸಂಗೀತ ನಿರ್ದೇಶಕ ಹಾಗೂ ವಯೋಲಿನ್ ವಾದಕ ಬಾಲಭಾಸ್ಕರ್(40) ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಸೆಪ್ಟಂಬರ್ 25 ರಂದು ತಿರುವನಂತಪುರದಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.
ಸೆಪ್ಟಂಬರ್ 25 ರಂದು ನಡೆದ ಅಪಘಾತದಲ್ಲಿ ಬಾಲಭಾಸ್ಕರ್ ಅವರ 2 ವರ್ಷದ ಮಗಳು ತೇಜಸ್ವಿನಿ ಸಾವನ್ನಪ್ಪಿದ್ದಳು, ಪತ್ನಿ ಲಕ್ಷ್ಮಿ ಮತ್ತಿ ಚಾಲಕ ಅರ್ಜುನ್ ಅವರಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ.
ತಿರುವನಂತಪುರದ ಪಲ್ಲಿಪ್ಪುರಂ ಬಳಿ ನಿಯಂತ್ರಣ ಕಳೆದುಕೊಂಡ ಕಾರು ಮರಕ್ಕೆ ಡಿಕ್ಕಿ ಹೊಡೆದಿತ್ತು,