ಬೆಂಗಳೂರು: ಧ್ರುವ ಸರ್ಜಾ ಜೊತೆ ಸಿನಿಮಾ ಮಾಡುತ್ತಿರುವ ಉದಯ್ ಮೆಹ್ತಾ ಚಿರಂಜೀವಿ ಸರ್ಜಾ ಅವರ ಮುಂದಿನ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಈ ವಾರ ಪ್ರಾಜೆಕ್ಟ್ ಬಗ್ಗೆ ಫೈನಲ್ ಆಗಲಿದ್ದು,ಶೀಘ್ರವೇ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.
ಇಬ್ಬರೂ ಉತ್ತಮ ಕಥೆಯುಳ್ಳ ಚಿತ್ರ ತರಲು ನಿರ್ಧರಿಸಿದ್ದು, ನಿರ್ದೇಶಕ ಹಾಗೂ ಕಥೆಗಾಗಿ ಹುಡುಕಾಟ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚಿನ ವಿಷಯವನ್ನು ಅಕ್ಟೋಬರ್ 17 ರಂದು ತಿಳಿಸಲಿದ್ದಾರೆ. ಅಂದು ಚಿರಂಜೀವಿ ಸರ್ಜಾ ಹುಟ್ಟು ಹಬ್ಬವಿದೆ, ಅಂದು ಎಲ್ಲಾ ಮಾಹಿತಿಗಳು ಹೊರಬೀಳಲಿವೆ.
ಅಮ್ಮಾ ಐ ಲವ್ ಯೂ ಸಿನಿಮಾ ನಂತರ ಚಿರಂಜೀವಿ ಮೇಘನಾ ರಾಜ್ ಜೊತೆ ವಿವಾಹವಾದರು. ಸದ್ಯ ರಾಮ್ ನಾರಾಯಣ ಅವರ ಮಾರ್ತಾಂಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ, ಜೊತೆಗೆ ರಣಂ ಸಿನಿಮಾದಲ್ಲೂ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ.