ಬಿಗ್ ಬಾಸ್ ಕನ್ನಡ 6ನೇ ಆವೃತ್ತಿ ಪ್ರಾರಂಭ: ಕಂಡಕ್ಟರ್, ಕೃಷಿಕ, ಸಾಮಾನ್ಯ ಜನರು ಸ್ಪರ್ಧಾಕಣದಲ್ಲಿ!

ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಆರನೇ ಆವೃತ್ತಿಯಲ್ಲಿ ವಿವಿಧ ಕ್ಷೇತ್ರಗಳ 18 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಬಸ್ ಕಂಡಕ್ಟರ್ ಆನಂದ್ ಮತ್ತು ಕೃಷಿಕ ಶಶಿ ಕುಮಾರ್ ಕೂಡಾ ಸ್ಪರ್ಧಾ ಕಣದಲ್ಲಿದ್ದು, ನಟ,ನಟಿಯರ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.
ನಟ ಸುದೀಪ್
ನಟ ಸುದೀಪ್

ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ  ಬಿಗ್ ಬಾಸ್ ಆರನೇ ಆವೃತ್ತಿಯಲ್ಲಿ ವಿವಿಧ ಕ್ಷೇತ್ರಗಳ 18 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಬಸ್ ಕಂಡಕ್ಟರ್ ಆನಂದ್ ಮತ್ತು ಕೃಷಿಕ ಶಶಿ ಕುಮಾರ್  ಕೂಡಾ ಸ್ಪರ್ಧಾ ಕಣದಲ್ಲಿದ್ದು, ನಟ,ನಟಿಯರ  ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಶಶಿಕುಮಾರ್  ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಜೊತೆಗೆ ಭೂಮಿಕ ನೃತ್ಯ ತಂಡದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಸೋನು ಪಾಟೀಲ್, ಆಂಡ್ರ್ಯೂ ಜೇಪಾಲ್, ಜಯಶ್ರೀ ರಾಜ್,  ರಕ್ಷಿತ್ ರೈ, ಕವಿತಾ ಗೌಡ, ಲಕ್ಷ್ಮೀ ಭಾರಮ್ಮ ಧಾರಾವಾಹಿಯ ಲಚ್ಚಿ ಮತ್ತು ಆಡಮ್ ಪಾಶ,  ಎಂ. ಜೆ. ರಾಕೇಶ್, ಆರ್ . ಜೆ. ರಾಪಿಡ್ ರಶ್ಮಿ,  ಎ. ವಿ. ರವಿ. ರೀಮಾ ಡಯಾಸ್,  ನವೀನ್ ಸಜ್ಜು,  ಸ್ನೇಹಾ ಆಚಾರ್ಯ , ನೈನಾ ಪುಟ್ಟಸ್ವಾಮಿ, ಸಿ.ಎಂ. ಧನರಾಜ್  ಮತಿತ್ತರರು ಬಿಗ್ ಬಾಸ್ ಮನೆಯಲ್ಲಿದ್ದಾರೆ.
ನಟ ಸುದೀಪ್ ಸುದೀಪ್ ನಡೆಸಿಕೊಡಲಿರುವ  ಬಿಗ್ ಬಾಸ್ 100 ದಿನಗಳ ಷೋ ಆಗಿದ್ದು, ವಿವಿಧ ಕನ್ನಡ ಸೆಲೆಬ್ರಿಟಿಗಳು ಅತಿಥಿಗಳಾಗಿ ಭಾಗವಹಿಸುತ್ತಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ  ಪ್ರತಿದಿನ ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೂ ಈ ಕಾರ್ಯಕ್ರಮ ಮೂಡಿಬರಲಿದ್ದು, ಭಾನುವಾರ ಮನೆಯಿಂದ ಒಬ್ಬರು ನಿರ್ಗಮಿಸುವ ಸುತ್ತು ಇರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com