ಇದೇ ಶುಕ್ರವಾರ ಮೇಘನರಾಜ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಚಿತ್ರ ಬಿಡುಗಡೆ

ಮೇಘನರಾಜ್ ವಿವಾಹದ ನಂತರ ಅಭಿಯಿಸಿರುವ 'ಇರುವುದೆಲ್ಲವ ಬಿಟ್ಟು' ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ವೃತ್ತಿ ಬದುಕು, ವಿವಾಹ ಹಾಗೂ ಕುಟುಂಬ ಮತ್ತಿತರ ಸಂಬಂಧದ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಕಾಂತಾ ಕನ್ನಲ್ಲಿ ನಿರ್ದೇಶನ ಮಾಡಿದ್ದಾರೆ.
ಮೇಘನರಾಜ್
ಮೇಘನರಾಜ್
ಬೆಂಗಳೂರು: ಮೇಘನರಾಜ್ ವಿವಾಹದ ನಂತರ ಅಭಿಯಿಸಿರುವ  'ಇರುವುದೆಲ್ಲವ ಬಿಟ್ಟು' ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ವೃತ್ತಿ ಬದುಕು, ವಿವಾಹ ಹಾಗೂ ಕುಟುಂಬ ಮತ್ತಿತರ ಸಂಬಂಧದ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಕಾಂತಾ ಕನ್ನಲ್ಲಿ ನಿರ್ದೇಶನ ಮಾಡಿದ್ದಾರೆ.
ಸಂಬಂಧಗಳಿಗೆ ಇಲ್ಲಿ  ನಿರ್ದೇಶಕರು ಪ್ರಾಮುಖ್ಯತೆ ನೀಡಿದ್ದಾರೆ. ಹಾಸ್ಯ, ಸಂಬಂಧ ಭರಿತ ಮನರಂಜನೆ ಪೂರಿತ ಚಿತ್ರ ಇದಾಗಿದೆ. ಯಾವುದೇ ಒಂದು ವಯಸ್ಸಿನವರನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಾಲ್ಕು ತಿಂಗಳ ಕಾಲ ಯೋಚಿಸಿ ಚಿತ್ರ ಒಪ್ಪಿಕೊಂಡೆ ಎಂದು ಹೇಳುವ ಮೇಘನರಾಜ್, ತನ್ನ ಭವಿಷ್ಯದ ಬಗ್ಗೆ ಪತಿ ಚಿರಂಜೀವಿ ಸರ್ಜಾ, ಧ್ರವ ಸರ್ಜಾ ಮತ್ತಿತರ ಪ್ರೋತ್ಸಾಹ ಉತ್ತಮವಾಗಿದೆ ಎಂದು ಮೇಘನರಾಜ್  ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com