ಕಾರು ಅಪಘಾತ: ಆಸ್ಪತ್ರೆಯಿಂದ ದೇವರಾಜ್, ಪ್ರಜ್ವಲ್ ಡಿಸ್ಚಾರ್ಜ್

ಕಾರು ಅಪಘಾತದಲ್ಲಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ದೇವರಾಜ್ ಹಾಗೂ...
ದೇವರಾಜ್, ಪ್ರಜ್ವಲ್
ದೇವರಾಜ್, ಪ್ರಜ್ವಲ್
ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ದೇವರಾಜ್ ಹಾಗೂ ಅವರ ಪುತ್ರ ಪ್ರಜ್ವಲ್ ದೇವರಾಜ್ ಅವರು ಮಂಗಳವಾರ ಡಿಸ್ಚಾರ್ಜ್ ಆಗಿದ್ದಾರೆ.
ಡಿಸ್ಚಾರ್ಜ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವರಾಜ್ ಅವರು​, ಹುಟ್ಟು ಹಬ್ಬದ ಸೆಲಬ್ರೆಷನ್ ಮಧ್ಯಾಹ್ನವೇ ಮುಗಿದಿತ್ತು. ರಾತ್ರಿ ಸ್ನೇಹಿತರ ಮನೆಗೆ ಊಟಕ್ಕೆ ತೆರಳಿದ್ದೇವು. ಊಟ ಮುಗಿಸಿ ವಾಪಸ್​ ಬರುವಾರ ಕಾರು ಸ್ಕಿಡ್ ಆಗಿ ಅಪಘಾತವಾಗಿದೆ. ಅದೃಷ್ಟವಶಾತ್​ ಯಾರಿಗೂ ಗಂಭೀರ ತೊಂದರೆಯಾಗಿಲ್ಲ. 10 ದಿನಗಳ ಕಾಲ ವಿಶ್ರಾಂತಿ ಪೆಡೆಯಲು ವೈದ್ಯರು ಸೂಚಿಸಿದ್ದಾರೆ ಎಂದರು.
ನಟ ದರ್ಶನ್, ದೇವರಾಜ್ ಹಾಗೂ ಪ್ರಜ್ವಲ್ ಪ್ರಯಾಣಿಸುತ್ತಿದ್ದ ಕಾರು ಸೋಮವಾರ ಬೆಳಗ್ಗೆ ಮೈಸೂರಿನ ಹೊರವಲಯದ ರಿಂಗ್ ರೋಡ್ ನಲ್ಲಿ ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಗಾಯಗೊಂಡಿದ್ದ ಈ ಮೂವರು ನಟರನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಬಳಿಕ ದೇವರಾಜ್ ಹಾಗೂ ಪುತ್ರ ಪ್ರಜ್ವಲ್ ದೇವರಾಜ್ ಡಿಸ್ಚಾರ್ಜ್ ಆಗಿದ್ದು, ದರ್ಶನ್ ಇನ್ನೂ ಆಸ್ಪತ್ರೆಯಲ್ಲಿದ್ದಾರೆ.
ನಟ ದೇವರಾಜ್ ಗೆ ಎಡಗೈಗೆ ಪೆಟ್ಟಾಗಿದ್ದು, ಬ್ಯಾಂಡೇಜ್ ಮಾಡಲಾಗಿದೆ. ಪುತ್ರ ಪ್ರಜ್ವಲ್ ದೇವರಾಜ್​ಗೆ ಎಡಗೈ ಹಾಗೂ ಎಡಭಾಗದ ಹಣೆಗೆ ಸಣ್ಣ ಪೆಟ್ಟಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com