ತೋತಾಪುರಿ ಸಿನಿಮಾ ಆರಿಸಿಕೊಳ್ಳಲು ನಿರ್ದೇಶಕ ವಿಜಯ ಪ್ರಸಾದ್ ಕಾರಣ: ಧನಂಜಯ್

ಟಗರು ಸಿನಿಮಾದಲ್ಲಿ ವಿಲ್ಲನ್ ಪಾತ್ರ ನಿರ್ವಹಿಸಿದ್ದ ಡಾಲಿ ಧನಂಜಯ್ ತಾವು ತೋತಾಪುರಿ ಸಿನಿಮಾ ಒಪ್ಪಿಕೊಳ್ಳಲು ನಿರ್ದೇಶಕ ವಿಜಯಪ್ರಸಾದ್ ಕಾರಣ ಎಂದು ಹೇಳಿದ್ದಾರೆ....
ಧನಂಜಯ್
ಧನಂಜಯ್
ಟಗರು ಸಿನಿಮಾದಲ್ಲಿ ವಿಲ್ಲನ್ ಪಾತ್ರ ನಿರ್ವಹಿಸಿದ್ದ ಡಾಲಿ ಧನಂಜಯ್ ತಾವು ತೋತಾಪುರಿ ಸಿನಿಮಾ ಒಪ್ಪಿಕೊಳ್ಳಲು ನಿರ್ದೇಶಕ ವಿಜಯಪ್ರಸಾದ್ ಕಾರಣ ಎಂದು ಹೇಳಿದ್ದಾರೆ.
ತೋತಾಪುರಿ ಸಿನಿಮಾದಲ್ಲಿ  ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಜಗ್ಗೇಶ್ ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಅದಿತಿ ಪ್ರಭುದೇವ ಮತ್ತು ಸುಮನ್ ರಂಗನಾಥ್ ಕೂಡ ಅಭಿನಯಿಸಿದ್ದಾರೆ, 
ತೋತಾಪುರಿಯಲ್ಲಿ ಧನಂಜಯ್ ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ, ನನ್ನ ಶೂಟಿಂಗ್ ಇನ್ನೂ ಮೂರು ದಿನಗಳು ಮಾತ್ರ ಬಾಕಿಯಿದೆ, ಕೇರಳದಲ್ಲಿ ನಡೆದ ಶೂಟಿಂಗ್ ನಲ್ಲಿ ಗಡ್ಡದ ಲುಕ್ ನಲ್ಲಿ ಕಾಣಿಸಿಕೊಂಡಿರುವುದಾಗಿ ಧನಂಜಯ್ ಹೇಳಿದ್ದಾರೆ, ಈ ಸಿನಿಮಾ ತುಂಬಾ ವಿಭಿನ್ನವಾಗಿದೆ, ಅಪೂರ್ವವಾದದ್ದನ್ನು ಮಾಡಿದ್ದಾರೆ, ಮನರಂಜನೆಯ ಜೊತೆಗೆ ತತ್ವ ಸಿದ್ದಾಂತದ ಸಂದೇಶ ನೀಡಿದ್ದಾರೆ.
ಜಗ್ಗೇಶ್ ಮತ್ತು ಸುಮನ್ ರಂಗನಾಥ್ ಜೊತೆ ಧನಂಜಯ್ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡಿದ್ದಾರೆ, ಸುಮನ್ ರಂಗನಾಥ್, ಉತ್ತಮ  ಮನಸ್ಸುಳ್ಳ ಅದ್ಭುತ ನಟಿ ಎಂದು ಹೇಳಿದ್ದಾರೆ, ಆಕೆಯ ದೃಢ ನಿರ್ಧಾರ ಆಕೆ ಹಲವಾರು ವರ್ಷಗಳಿಂದ ಸಿನಿಮಾ ರಂಗದಲ್ಲಿ ಇರಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com