ತೋತಾಪುರಿಯಲ್ಲಿ ಧನಂಜಯ್ ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ, ನನ್ನ ಶೂಟಿಂಗ್ ಇನ್ನೂ ಮೂರು ದಿನಗಳು ಮಾತ್ರ ಬಾಕಿಯಿದೆ, ಕೇರಳದಲ್ಲಿ ನಡೆದ ಶೂಟಿಂಗ್ ನಲ್ಲಿ ಗಡ್ಡದ ಲುಕ್ ನಲ್ಲಿ ಕಾಣಿಸಿಕೊಂಡಿರುವುದಾಗಿ ಧನಂಜಯ್ ಹೇಳಿದ್ದಾರೆ, ಈ ಸಿನಿಮಾ ತುಂಬಾ ವಿಭಿನ್ನವಾಗಿದೆ, ಅಪೂರ್ವವಾದದ್ದನ್ನು ಮಾಡಿದ್ದಾರೆ, ಮನರಂಜನೆಯ ಜೊತೆಗೆ ತತ್ವ ಸಿದ್ದಾಂತದ ಸಂದೇಶ ನೀಡಿದ್ದಾರೆ.