ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಗೌಡ ನಟನೆಯ ಚೊಚ್ಚಲ ಸಿನಿಮಾ ಅಮರ್ ಬಿಡುಗಡೆಯಾಗಿದೆ, ನಿರ್ದೇಶಕ ನಾಗಶೇಖರ್ ತಾನ್ಯ ಹೋಪ್ ಪಾತ್ರದ ಬಗ್ಗೆ ರಹಸ್ಯ ಬಿಚ್ಚಿಟ್ಟಿದ್ದಾರೆ.
ಕನ್ನಡದ ಹಿರಿಯ ನಟಿ ಮಹಾಲಕ್ಷ್ಮಿ ಜೀವನ ಚರಿತ್ರೆಯಿಂದ ಸ್ಫೂರ್ತಿಗೊಂಡ ನಾಗಶೇಖರ್ ಅವರ ನೈಜ ಜೀವನದ ಕಥೆಯಿಂದ ತಾನ್ಯಾ ಹೋಪ್ ಪಾತ್ರ ಹೆಣೆದಿದ್ದಾರಂತೆ, 1980 ರ ದಶಕದಲ್ಲಿ ಕನ್ನಡ ಸಿನಿಮಾ ಉದ್ಯಮದಲ್ಲಿ ಜನಪ್ರಿಯ ನಾಯಕಿಯಾಗಿದ್ದ ಮಹಾಲಕ್ಷ್ಮಿ ಈಗ ಸನ್ಯಾಸಿಯಾಗಿದ್ದಾರೆ.
ಅವರ ನಿಜ ಜೀವನದ ಕಥೆಯಿಂದ ಸ್ಪೂರ್ತಿ ಪಡೆದ ನಾಗಶೇಖರ್ ಅಮರ್ ಚಿತ್ರದಲ್ಲಿ ಸಣ್ಣ ಎಳೆಯೊಂದನ್ನು ತಂದು ತಾನ್ಯ ಪಾತ್ರ ಸೃಷ್ಟಿಸಿದ್ದಾರೆ,
ಸಾಮಾಜಿಕ ಮಾಧ್ಯಮದಲ್ಲಿ ನಟಿ ಮಹಾಲಕ್ಷ್ಮಿ ಜೀವನದ ಬಗ್ಗೆ ತಿಳಿದುಕೊಂಡಿದ್ದರು, ಕನ್ನಡ ಚಿತ್ರೋದ್ಯಮ ಆಳಿದ ನಟಿ ಸಂನ್ಯಾಸಿಯಾಗಿದ್ದಾರೆ, ಅವರ ಜೀವನದ ಜೀವನ ಕಥೆಯ ಒಂದು ಎಳೆಯನ್ನು ತಾನ್ಯಾ ಹೋಪ್ ಪಾತ್ರವಾಗಿ ಸೃಷ್ಟಿಸಿದ್ದಾರೆ.