ಮೊದಲು ಕನ್ನಡ ಸಿನಿಮಾಗಳಿಗೆ ನನ್ನ ಆದ್ಯತೆ: ಶ್ರೀಲೀಲಾ 

ಚಿತ್ರರಂಗಕ್ಕೆ ಈಗಷ್ಟೇ ಪಾದಾರ್ಪಣೆ ಮಾಡಿರುವ ಶ್ರೀಲೀಲಾ ಅವರ ಕಿಸ್ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಕೆಜಿಎಫ್ ನಾಯಕ, ರಾಕಿಂಗ್ ಸ್ಟಾರ್ ಯಶ್ ಚಿತ್ರದ ಬಗ್ಗೆ ಮತ್ತು ತನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದಾಗ ಈ ನಟಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.  
ಶ್ರೀಲೀಲಾ
ಶ್ರೀಲೀಲಾ

ಚಿತ್ರರಂಗಕ್ಕೆ ಈಗಷ್ಟೇ ಪಾದಾರ್ಪಣೆ ಮಾಡಿರುವ ಶ್ರೀಲೀಲಾ ಅವರ ಕಿಸ್ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಕೆಜಿಎಫ್ ನಾಯಕ, ರಾಕಿಂಗ್ ಸ್ಟಾರ್ ಯಶ್ ಚಿತ್ರದ ಬಗ್ಗೆ ಮತ್ತು ತನ್ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದಾಗ ಈ ನಟಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. 


ಇತ್ತೀಚೆಗೆ ಕಿಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಅದಕ್ಕೆ ಯಶ್ ಬಂದು ಚಿತ್ರತಂಡಕ್ಕೆ ಹಾರೈಸಿದ್ದಾರೆ. ಆಗ ವಿಶೇಷವಾಗಿ ಶ್ರೀಲೀಲಾ ಬಗ್ಗೆ ಪ್ರಸ್ತಾಪಿಸಿದ ಯಶ್ ನಟಿಯಾಗಿ ಆಕೆ ಭಾರತದ ಉದ್ದಗಲಕ್ಕೂ ಬೆಳೆಯುತ್ತಾಳೆ ಎಂದಿದ್ದಾರೆ.


ಇದು ಶ್ರೀಲೀಲಾಗೆ ಸಾಕಷ್ಟು ಹುರುಪು ಮತ್ತು ಉತ್ತೇಜನ ನೀಡಿದೆ. ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ನಟಿಸಬೇಕು, ಪ್ರತಿಭೆ ತೋರಿಸಬೇಕೆಂದು ನನಗೂ ಆಸೆಯಿದೆ. ಆದರೆ ಯಾವ ಚಿತ್ರರಂಗಕ್ಕೆ ಹೋದರೂ ಕೂಡ ಕನ್ನಡವನ್ನು, ತಾಯ್ನೆಲವನ್ನು ಮರೆಯುವುದಿಲ್ಲ ಎನ್ನುತ್ತಾರೆ.


ಶ್ರೀಲೀಲಾ ಇನ್ನೂ ಅಧ್ಯಯನ ನಡೆಸುತ್ತಿದ್ದಾರೆ. ದಕ್ಷಿಣ ಚಿತ್ರೋದ್ಯಮದವರ ಗಮನ ಸೆಳೆದಿದ್ದು ಕೆಲವು ಉತ್ತಮ ಅವಕಾಶಗಳು ಬರುತ್ತಿವೆಯಂತೆ. ಆದರೆ ಸದ್ಯಕ್ಕೆ ಕನ್ನಡವೇ ನನ್ನ ಆದ್ಯತೆ, ಇಲ್ಲಿಯೇ ನಾನು ಗುರುತಿಸಿ ನೆಲೆನಿಲ್ಲಬೇಕು, ನಂತರ ಬೇರೆ ಚಿತ್ರರಂಗದ ಕಡೆ ಗಮನ ಹರಿಸುತ್ತೇನೆ ಎಂದರು.


ಕಿಸ್ ಚಿತ್ರದ ನಿರ್ದೇಶಕರು ಎ ಪಿ ಅರ್ಜುನ್. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಅಕ್ಟೋಬರ್ ನಲ್ಲಿ ತೆರೆಗೆ ಬರಲಿದೆ. ಚೊಚ್ಚಲ ಚಿತ್ರ ಬಿಡುಗಡೆಯಾದ ನಂತರ ಮೂರನೇ ಸಿನಿಮಾದಲ್ಲಿ ಶ್ರೀಲೀಲಾ ಕೆಲಸ ಮಾಡಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com