ಪುಟ್ಟ ಅಭಿಮಾನಿಯ ಕೊನೆ ಆಸೆ ಈಡೇರಿಸಿದ ದರ್ಶನ್: ಮಗುವಿನ ಕುಶಲೋಪರಿ ವಿಚಾರಿಸಿದ ದಾಸ! ವಿಡಿಯೋ ವೈರಲ್

ವೈದ್ಯರ ನಿರ್ಲಕ್ಷ್ಯದಿಂದಾಗಿ ಕಾಲು ಕಳೆದುಕೊಂಡ ಪುಟ್ಟ ಅಭಿಮಾನಿಯೊಬ್ಬನನ್ನು ನಟ ದರ್ಶನ್ ಭೇಟಿ ಮಾಡಿ ಮಾನವೀಯತೆ ಮೆರೆದಿದ್ದಾರೆ...
ದರ್ಶನ್
ದರ್ಶನ್
ಬೆಂಗಳೂರು: ವೈದ್ಯರ ನಿರ್ಲಕ್ಷ್ಯದಿಂದಾಗಿ ಕಾಲು ಕಳೆದುಕೊಂಡ ಪುಟ್ಟ ಅಭಿಮಾನಿಯೊಬ್ಬನನ್ನು ನಟ ದರ್ಶನ್ ಭೇಟಿ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಬಳ್ಳಾರಿ ಮೂಲದ  ಕೀರ್ತಿ ಎಂಬ ಬಾಲಕನನ್ನು ಭೇಟಿ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆತನ ಉಭಯ ಕುಶಲೋಪರಿ ವಿಚಾರಿಸಿದ್ದಾರೆ.
ಇದೇ ವೇಳೆ ವೈದ್ಯರು ಆಸ್ಪತ್ರೆಯಲ್ಲಿ ತೋರುವ ನಿರ್ಲಕ್ಷ್ಯದ ಬಗ್ಗೆ ಮಾತನಾಡಿರುವ ದರ್ಶನ್, ತಮ್ಮ ತಂದೆ ಅನಾರೋಗ್ಯಕ್ಕೊಳಗಾದಾಗ ವೈದ್ಯರು ನಡೆದುಕೊಂಡ ರೀತಿ ಬಗ್ಗೆ, ಅವರು ವಿವರಿಸಿದ್ದಾರೆ, ತಮ್ಮ ತಂದೆಯ ಕಿಡ್ನಿ ಹಾಳಾಗಲು ವೈದ್ಯರು ಕಾರಣ ಎಂದು ಹೇಳಿದ್ದಾರೆ. ಈ ವೇಳೆ ಬಾಲಕನ ಪೋಷಕರಿಗೆ ಸಾಂತ್ವನ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com