ಮಾಧ್ಯಮ ಪ್ರತಿನಿಧಿಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಮಂಡಳಿಯ ಅಧ್ಯಕ್ಷ ಚಿನ್ನೇಗೌಡ, ವೀರೇಶ್, ಕರಿಸುಬ್ಬು, ಸುಂದರರಾಜ್ ಮತ್ತಿತರರು ಈ ಕುರಿತು ಪ್ರಸ್ತಾಪಿಸಿ, ಮೋಸ ಹೋಗುವವರು ಇರುವತನಕ ಮೋಸ ಮಾಡುವವರೂ ಇರುತ್ತಾರೆ. ಕೆಲ ನಯವಂಚಕರು ಬುಕ್ ಮೈ ಶೋ ಹೆಸರಿನಲ್ಲಿ ನಿರ್ಧಿಷ್ಟ ಪ್ಯಾಕೇಜ್ ಗಳಿಗೆ ಇಂತಿಷ್ಟು ಹಣ ನೀಡುವಂತೆ ಹೇಳಿ ಸುಲಿಗೆ ಮಾಡುತ್ತಿದ್ದಾರೆ.