'ರಂಗನಾಯಕಿ’ಗೆ ನಿರ್ಭಯಾ ಸ್ಫೂರ್ತಿ : ದಯಾಳ್ ಪದ್ಮನಾಭನ್

ದೇಶ ವಿದೇಶಗಳ ಜನರನ್ನು ಬೆಚ್ಚಿಬೀಳಿಸಿದ ದೆಹಲಿಯ ನಿರ್ಭಯಾ ಪ್ರಕರಣವೇ ತಮ್ಮ ’ರಂಗನಾಯಕಿ’ ಚಿತ್ರಕ್ಕೆ ಸ್ಫೂರ್ತಿ ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ತಿಳಿಸಿದ್ದಾರೆ.
ದಯಾಳ್ ಪದ್ಮನಾಭನ್
ದಯಾಳ್ ಪದ್ಮನಾಭನ್

ಪಣಜಿ: ದೇಶ ವಿದೇಶಗಳ ಜನರನ್ನು ಬೆಚ್ಚಿಬೀಳಿಸಿದ ದೆಹಲಿಯ ನಿರ್ಭಯಾ ಪ್ರಕರಣವೇ ತಮ್ಮ ’ರಂಗನಾಯಕಿ’ ಚಿತ್ರಕ್ಕೆ ಸ್ಫೂರ್ತಿ ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ತಿಳಿಸಿದ್ದಾರೆ.

ಗೋವಾದಲ್ಲಿ ನಡೆಯುತ್ತಿರುವ ೫೦ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಮುಕರ ದೌರ್ಜನ್ಯಕ್ಕೆ ಗುರಿಯಾದ ನಿರ್ಭಯಾ ಒಂದು ವೇಳೆ ಬದುಕಿದ್ದರೆ ಏನಾಗುತ್ತಿತ್ತು? ಆಕೆಯನ್ನು ಸಮಾಜ ಹೇಗೆ ಕಾಣುತ್ತಿತ್ತು? ಅದನ್ನು ಆಕೆ ಹೇಗೆ ಎದುರಿಸುತ್ತಿದ್ದಳು ಎಂಬೆಲ್ಲ ಕಲ್ಪನೆಯೊಂದಿಗೆ ’ರಂಗನಾಯಕಿ’ ಚಿತ್ರಕಥೆ ಹೆಣೆಯಲಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಖ್ಯಾತ ನಿರ್ದೇಶಕ ಪುಟ್ಟಣ ಕಣಗಾಲ್ ಸಾರಥ್ಯದಲ್ಲಿ ೧೯೮೧ರಲ್ಲಿ ’ರಂಗನಾಯಕಿ’ ಚಿತ್ರ ತೆರೆಕಂಡಿತ್ತು ಚಿತ್ರ ತೀವ್ರ ಪ್ರಭಾವ ಬೀರಿದ್ದರಿಂದ ಮತ್ತೆ ಅದೇ ಶೀರ್ಷಿಕೆಯಲ್ಲಿ ಚಿತ್ರ ನಿರ್ಮಿಸಿದ್ದು, ಅದನ್ನು ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸಿರುವುದಾಗಿ ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com