ಹೆಸರು ತಿಳಿದ ದಿನವೇ ದೇಶ ಬಿಟ್ಟು ಓಡಿಹೋಗಿರಿ: ವಿಷ್ಣು ಪುತ್ಥಳಿ ಧ್ವಂಸ ಮಾಡಿದವರಿಗೆ  ಕಿಚ್ಚ ಸುದೀಪ್ ಖಡಕ್ ಎಚ್ಚರಿಕೆ

"ನಿಮ್ಮ ಹೆಸರು ಗೊತ್ತಾದ ದಿನವೇ ದೇಶ ಬಿಟ್ಟು ಹೋಗಿ" ಎಂದು ಸಾಹಸಸಿಂಹ ವಿಷ್ಣುವರ್ಧನ್ ಪುತ್ಥಳಿ ಧ್ವಂಸ ಮಾಡಿದವರಿಗೆ ಕಿಚ್ಚ ಸುದೀಪ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಹೆಸರು ತಿಳಿದ ದಿನವೇ ದೇಶ ಬಿಟ್ಟು ಓಡಿಹೋಗಿರಿ: ವಿಷ್ಣು ಪುತ್ಥಳಿ ಧ್ವಂಸ ಮಾಡಿದವರಿಗೆ  ಕಿಚ್ಚ ಸುದೀಪ್ ಖಡಕ್ ಎಚ್ಚರಿಕೆ

"ನಿಮ್ಮ ಹೆಸರು ಗೊತ್ತಾದ ದಿನವೇ ದೇಶ ಬಿಟ್ಟು ಹೋಗಿ" ಎಂದು ಸಾಹಸಸಿಂಹ ವಿಷ್ಣುವರ್ಧನ್ ಪುತ್ಥಳಿ ಧ್ವಂಸ ಮಾಡಿದವರಿಗೆ ಕಿಚ್ಚ ಸುದೀಪ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ವಿಡಿಯೋ ಸಂದೇಶ ನಿಡಿರುವ ಸುದೀಪ್ "ಪುತ್ಥಳಿ ಧ್ವಂಸ ಮಾಡಿದ ಮಹಾನುಭಾವರಿಗೆ ನಾನು ಹೇಳುವುದಿಷ್ಟೆ, ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ, ಏಕೆಂದರೆ ಅಷ್ಟು ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ ಅವರಿಗೆ ನೀವೇ ಪುತ್ಥಳಿ ಧ್ವಂಸ ಮಾಡಿದ್ದೆಂದು ತಿಳಿದರೆ ನಿಮ್ಮನ್ನು ಇದಕ್ಕಿಂತ ಹೆಚ್ಚಿನ ಕೆಟ್ಟ ರೀತಿಯಲ್ಲಿ ಹೊಡೆಯುತ್ತಾರೆ." ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

"ನಿಮ್ಮ ಉದ್ದೇಶ ನನಗೆ ಅರ್ಥವಾಗಿಲ್ಲ, ಅರ್ಥವಾಗಲು ಸಾಧ್ಯವೂ ಇಲ್ಲಏಕೆಂದರೆ ಮನುಷ್ಯರಿಗೆ ಇದು ಅರ್ಥವಾಗುವುದಿಲ್ಲ, ಹಾಗಾಗಿ ಸಿಕ್ಕಿಹಾಕಿಕೊಳ್ಲದಂತೆ ಎಚ್ಚರ ವಹಿಸಿ, ನೀವು ಸಿಕ್ಕಿ ಹಾಕಿಕೊಂಡ ದಿನ ಏನು ನಡೆಯಲಿದೆ ಹೇಳಲು ಬರುವುದಿಲ್ಲ

"ನೀವು ಮೂರ್ತಿಯನ್ನು ಒಡೆಯುವ ಮುನ್ನ ಒಮ್ಮೆ ಯೋಚಿಸಿದ್ದರೆ ತಿಳಿಯುತ್ತಿತ್ತು, ಏಕೆಂದರೆ ಅದೊಬ್ಬ ಮನುಷ್ಯನಾಗಿ, ವ್ಯಕ್ತಿಯಾಗಿ ಮಾಡುವ ಕೆಲಸವೇ ಅಲ್ಲ, ನಿಮ್ಮ ಹೆಸರು ತಿಳಿದ ದಿನವೇ ದೇಶ ಬಿಟ್ಟು ಓಡಿಹೋಗಿರಿ.ಇದು ನಾನು ನಿಮಗೆ ನೀಡುತ್ತಿರುವ ಸಲಹೆ.

"ಈ ಮೂರ್ತಿಗೆ ಹೆಚ್ಚಿನದಾದ, ಅದರಪ್ಪನಂತಹಾ ಮೂರ್ತಿ ನಿರ್ಮಿಸುತ್ತೇವೆ.ಅದು ಬೇರೆ ವಿಚಾರ ಆದರೆ ನೀವು ಸಿಕ್ಕಿಹಾಕಿಕೊಳ್ಳಬೇಡಿ." ಎಂದು ಸುದೀಪ್ ವಿಡಿಯೋದಲ್ಲಿ ಹೇಳಿದ್ದಾರೆ.

ಇದಕ್ಕೆ ಮುನ್ನ ನಿನ್ನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಸಂಬಂಧ ತಮ್ಮ ಅಸಮಾಧಾನ ಹೊರಹಾಕಿದ್ದರು. 

"ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸೋ, ಆರಾಧಿಸೋ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸ ಸಿಂಹ ಡಾ|| ವಿಷ್ಣು ಸರ್ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು ಯಾರು ಇಲ್ಲದ ಹೊತ್ತಿನಲ್ಲಿ ಧ್ವಂಸ ಮಾಡಿರುವುದು ನಾಚಿಕೆಯ ಸಂಗತಿ. ಇಂತ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು." ಎಂದು ದರ್ಶನ್ ಆಗ್ರಹಿಸಿದ್ದರು. 

ವಿಷ್ಣು ಅಳಿಯ ಅನಿರುದ್ಧ್ ಸಹ ಪುತ್ಥಳಿ ಧ್ವಂಸ ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com