ಸಂಭಾವನೆ ವಿಚಾರಕ್ಕೆ 'ಕೆಜಿಎಫ್ 2' ಚಿತ್ರವನ್ನು ತಿರಸ್ಕರಿಸಿದ್ದ 'ಬಾಹುಬಲಿ' ಪ್ರಖ್ಯಾತ ನಟಿ!

ಕನ್ನಡ ಚಿತ್ರರಂಗದ ದಿಕ್ಕು ದಿಸೆ ಬದಲಿಸಿದ ಕೆಜಿಎಫ್ ಭಾರತೀಯ ಸಿನಿಮಾರಂಗವೇ ಸ್ಯಾಂಡಲ್ವುಡ್ ನತ್ತ ತಿರುಗಿ ನೋಡುವಂತೆ ಮಾಡಿತ್ತು. ಇನ್ನು ಈ ಚಿತ್ರದಲ್ಲಿ ನಟಿಸುಬೇಕೆಂದು ಹಲವು ನಟ-ನಟಿಯರೂ ಆಶಿಸುತ್ತಿರುವಾಗಲೇ ಬಾಹುಬಲಿ ನಟಿಯೊಬ್ಬರು ಸಂಭಾವನೆ ವಿಚಾರಕ್ಕೆ ಚಿತ್ರವನ್ನು ತಿರಸ್ಕರಿಸಿದ್ದಾರೆ.
ಯಶ್
ಯಶ್

ಕನ್ನಡ ಚಿತ್ರರಂಗದ ದಿಕ್ಕು ದಿಸೆ ಬದಲಿಸಿದ ಕೆಜಿಎಫ್ ಭಾರತೀಯ ಸಿನಿಮಾರಂಗವೇ ಸ್ಯಾಂಡಲ್ವುಡ್ ನತ್ತ ತಿರುಗಿ ನೋಡುವಂತೆ ಮಾಡಿತ್ತು. ಇನ್ನು ಈ ಚಿತ್ರದಲ್ಲಿ ನಟಿಸುಬೇಕೆಂದು ಹಲವು ನಟ-ನಟಿಯರೂ ಆಶಿಸುತ್ತಿರುವಾಗಲೇ ಬಾಹುಬಲಿ ನಟಿಯೊಬ್ಬರು ಸಂಭಾವನೆ ವಿಚಾರಕ್ಕೆ ಚಿತ್ರವನ್ನು ತಿರಸ್ಕರಿಸಿದ್ದಾರೆ.

ಕೆಜಿಎಫ್ 2 ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು ಬಾಲಿವುಡ್ ನ ಸಂಜಯ್ ದತ್ ಮತ್ತು ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾದ ಕಲಾವಿದರ ವಿಚಾರದಲ್ಲಿ ಚಿತ್ರತಂಡ ದೊಡ್ಡ ಮಟ್ಟದ ಪ್ಲಾನ್ ಮಾಡಿತ್ತು. ಇದೇ ರೀತಿ ಉತ್ತರ ಹಾಗೂ ದಕ್ಷಿಣ ಭಾರತದ ಕೆಲವು ಜನಪ್ರಿಯ ಕಲಾವಿದರನ್ನು ಸಂಪರ್ಕ ಮಾಡಿತ್ತು.

ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಪಾತ್ರದಲ್ಲಿ ನಟಿಸಿದ್ದ ರಮ್ಯಾಕೃಷ್ಣ ಅವರಿಗೆ ಕೆಜಿಎಫ್ 2 ಚಿತ್ರದಲ್ಲಿ ನಟಿಸಲು ಕೇಳಲಾಗಿತ್ತು. ಆದರೆ ಸಂಭಾವನೆ ವಿಚಾರದಲ್ಲಿ ಒಪ್ಪಿಗೆಯಾಗದೆ ರಮ್ಯಾಕೃಷ್ಣ ಅವರು ಚಿತ್ರವನ್ನು ತಿರಸ್ಕರಿಸಿದ್ದರಂತೆ.

ಬಾಹುಬಲಿ ಚಿತ್ರಕ್ಕಾಗಿ ರಮ್ಯಾಕೃಷ್ಣ ಅವರು 2.5 ಕೋಟಿ ರುಪಾಯಿ ಸಂಭಾವನೆ ಪಡೆದಿದ್ದರು. ಅಂದಿನಿಂದ ಶಿವಗಾಮಿಯ ಸಂಭಾವನೆ ಸ್ವಲ್ಪ ಹೆಚ್ಚಾಗಿತ್ತು. ದುಬಾರಿ ಸಂಭಾವನೆ ಕೇಳಿದ್ದರಿಂದ ರಮ್ಯಾಕೃಷ್ಣ ಅವರ ಬದಲಿಗೆ ಬಾಲಿವುಡ್ ನಟಿ ರವೀನಾ ಟಂಡನ್ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com