ಶ್ರೇಯಸ್ ಮಂಜು ಜೊತೆ 'ಕ್ಯೂ'ನಲ್ಲಿ ನಿಂತ ನಿರ್ದೇಶಕ ನಾಗಶೇಖರ್

ಪಡ್ಡೆಹುಲಿ ಚಿತ್ರದ ಮೂಲಕ ಭರವಸೆ ಮೂಡಿಸಿರುವ ನಟ ಶ್ರೇಯಸ್ ಮಂಜು ಅವರು ವಿಷ್ಣು ಪ್ರಿಯ ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಈ ನಡುವಲ್ಲೇ ನಿರ್ದೇಶಕ ನಾಗಶೇಖರ್ ಅವರು ನಿರ್ದೇಶಿಸುತ್ತಿರುವ ಚಿತ್ರವೊಂದಕ್ಕೆ ಹೀರೋ ಆಗಿ ನಟಿಸಲಿದ್ದಾರೆ. 
ಶ್ರೇಯಸ್ ಮಂಜು
ಶ್ರೇಯಸ್ ಮಂಜು

ಪಡ್ಡೆಹುಲಿ ಚಿತ್ರದ ಮೂಲಕ ಭರವಸೆ ಮೂಡಿಸಿರುವ ನಟ ಶ್ರೇಯಸ್ ಮಂಜು ಅವರು ವಿಷ್ಣು ಪ್ರಿಯ ಚಿತ್ರದ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಈ ನಡುವಲ್ಲೇ ನಿರ್ದೇಶಕ ನಾಗಶೇಖರ್ ಅವರು ನಿರ್ದೇಶಿಸುತ್ತಿರುವ ಚಿತ್ರವೊಂದಕ್ಕೆ ಹೀರೋ ಆಗಿ ನಟಿಸಲಿದ್ದಾರೆ. 

ಅಮರ್ ಚಿತ್ರದ ಬಳಿಕ ತಮಿಳುಚಿತ್ರರಂಗಕ್ಕೆ ಹೋಗಿ ಅಲ್ಲೊಂದು ಸಿನಿಮಾಮ ಪೂರ್ಣಗೊಳಿಸಿ ಬಂದಿರುವ ನಿರ್ದೇಶಕ ನಾಗಶೇಖರ್ ಅವರು ಇದೀಗ ಹೊಸ ಚಿತ್ರ ಕುರಿತು ಶ್ರೇಯಸ್ ಮಂಜು ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ. 

ಚಿತ್ರದ ಟೈಟಲ್ ಕ್ಯೂ ಆಗಿದ್ದು, ಟ್ಯಾಗ್'ಲೈನ್ ಎ ವಲ್ ಸ್ಟೋರಿ ಆಫ್ ಎ ಕ್ವೀನ್ ಎಂದು ಹೇಳಲಾಗುತ್ತಿದೆ. ಈ ಕುರಿತು ಶ್ರೇಯಸ್ ಬೈಕ್ ಓಡಿಸುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿರುವ ನಾಗಶೇಖರ್ ಅವರು ಸಂದೇಶ್ ಕಂಬೈನ್ಸ್'ಗಾಗಿ ನಿರ್ದೇಶನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. 

ನಾಗಶೇಖರ್ ಅವರ ತಂಡದಲ್ಲಿ ಬರುವ ಸತ್ಯ ಹೆಗಡೆ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸ್ಟಂಟ್ ಮಾಸ್ಟರ್ ರವಿ ವರ್ಮಾ, ಇಮ್ರಾನ್ ಸರ್ದಾರಿಯಾ ಹಾಗೂ ದೀಪು ಎಸ್ ಕುಮಾರ್ ಅವರೊಂದಿಗೆ ಕೆಲಸ ಮಾಡಲು ಇಚ್ಛಿಸಿದ್ದೆ. ಇಚ್ಛೆಯಂತೆಯೇ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಿರ್ದೇಶಕರು ಅತ್ಯುತ್ತಮವಾಗಿ ಕಥೆ ಬರೆದಿದ್ದಾರೆ. ಇದೊಂದು ಆ್ಯಕ್ಷನ್ ಕಮ್ ಡ್ರಾಮಾ ಚಿತ್ರವಾಗಿದ್ದು, ಪಾತ್ರ ನನಗೆ ಒಪ್ಪುವಂತಿದೆ. ಈ ಬಗ್ಗೆ ನನ್ನ ತಂದೆ ಜೊತೆಗೆ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆಂದು ಶ್ರೇಯಸ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com