ಹನಿಮೂನ್'ಗೆ ಇಟಲಿಗೆ ಹೋಗಿಲ್ಲ, ಸುಳ್ಳು ಸುದ್ದಿ ಬೇಡ: ಚಂದನ್ ಶೆಟ್ಟಿ, ನಿವೇದಿತಾ ಸ್ಪಷ್ಟನೆ

ನಾವು ಹನಿಮೂನ್'ಗೆ ನೆದರ್ ಲ್ಯಾಂಡ್'ಗೆ ಹೋಗಿದ್ದೆವೆಯೇ ಹೊರತು ಇಟಲಿಗೆ ಹೋಗಿರಲಿಲ್ಲ ಎಂದು ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಶನಿವಾರ ಸ್ಪಷ್ಟನೆ ನೀಡಿದ್ದಾರೆ. 
ಚಂದನ್ ಶೆಟ್ಟಿ, ನಿವೇದಿತಾ
ಚಂದನ್ ಶೆಟ್ಟಿ, ನಿವೇದಿತಾ

ಮಂಡ್ಯ: ನಾವು ಹನಿಮೂನ್'ಗೆ ನೆದರ್ ಲ್ಯಾಂಡ್'ಗೆ ಹೋಗಿದ್ದೆವೆಯೇ ಹೊರತು ಇಟಲಿಗೆ ಹೋಗಿರಲಿಲ್ಲ ಎಂದು ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಶನಿವಾರ ಸ್ಪಷ್ಟನೆ ನೀಡಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಚಂದನ್ ಶೆಟ್ಟಿಯವರು, ನಾವು ಇಟಲಿಗೆ ಹೋಗಿದ್ದೇವೆ ಎನ್ನುವುದು ಶುದ್ಧ ಸುಳ್ಳು. ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ನಾವು ಿಟಲಿಗೆ ಹೋಗಿಲ್ಲ. ಸಾಕ್ಷಿ ಪುರಾವೇ ಇಲ್ಲದೆ ಹೇಳಿದ್ದಾರೆ. ನಾವು ಎಲ್ಲಿಗೆ ಹೋಗಿದ್ದೆವು ಎನ್ನುವ ಬಗ್ಗೆ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಿದ್ದೇವೆಂದು ಹೇಳಿದ್ದಾರೆ. 

ಮಾ.3 ರಂದು ನೆದರ್ ಲ್ಯಾಂಡ್'ಗೆ ಹೋಗಿದ್ದೆವು. ಆ ವೇಳೆ ಅಲ್ಲಿ ಕೊರೋನಾ ಭೀತಿ ಇರಲಿಲ್ಲ. ಭೀತಿ ಸೃಷ್ಟಿಯಾದ ನಂತರ ವಾಪಸ್ ಬಂದಿದ್ದೇವೆ. ನಾವು ಆರೋಗ್ಯವಾಗಿಯೇ ಇದ್ದೇವೆ. ರಕ್ತ ಪರೀಕ್ಷೆ ಸೇರಿದಂತೆ ಎಲ್ಲಾ ರೀತಿಯ ತಪಾಸಣೆ ಮಾಡಿಸಲಾಗಿದೆ. ಯಾವುದೇ ರೀತಿಯ ತಪಾಸಣೆಗೂ ಸಿದ್ಧರಿದ್ದೇವೆ. ಕೊರೋನಾ ಭೀತಿಯಿಂದ ಹನಿಮೂನ್ ಟ್ರಿಪ್ ಅರ್ಧಕ್ಕೆ ನಿಂತಿದ್ದಕ್ಕೆ ಬೇಸರವಿದೆ. ಆದರೆ, ಆರೋಗ್ಯ ಮುಖ್ಯ. ಹೀಗಾಗಿ ಎಲ್ಲಾ ಸರಿ ಹೋದ ಮೇಲೆ ನಾನು ಮತ್ತೆ ಮಧುಚಂದ್ರಕ್ಕೆ ಹೋಗುತ್ತೇವೆಂದು ನಿವೇದಿತಾ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com