ಚಿಲ್ಲಂ ಚಿತ್ರವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ: ಮನು ರವಿಚಂದ್ರನ್

ಮನು ಕಲ್ಯಾಡಿ ನಿರ್ದೇಶನದ ಪ್ರಾರಂಭ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿರುವ ನಟ ಮನು ರವಿಚಂದ್ರನ್ ಅವರು ಮುಗಿಲ್‌ಪೇಟೆಯ ಚಿತ್ರೀಕರಣ ಪುನರಾರಂಭಿಸಲು ಕಾಯುತ್ತಿದ್ದಾರೆ. ಇದರ ಜೊತೆಗೆ ಇದೇ ವರ್ಷದಲ್ಲಿ ಚಿಲ್ಲಂ ಚಿತ್ರದ ಕೆಲಸವನ್ನೂ ಪ್ರಾರಂಭಿಸಲಿದ್ದಾರೆ.
ಮನು ರವಿಚಂದ್ರನ್
ಮನು ರವಿಚಂದ್ರನ್

ಮನು ಕಲ್ಯಾಡಿ ನಿರ್ದೇಶನದ ಪ್ರಾರಂಭ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿರುವ ನಟ ಮನು ರವಿಚಂದ್ರನ್ ಅವರು ಮುಗಿಲ್‌ಪೇಟೆಯ ಚಿತ್ರೀಕರಣ ಪುನರಾರಂಭಿಸಲು ಕಾಯುತ್ತಿದ್ದಾರೆ. ಇದರ ಜೊತೆಗೆ ಇದೇ ವರ್ಷದಲ್ಲಿ ಚಿಲ್ಲಂ ಚಿತ್ರದ ಕೆಲಸವನ್ನೂ ಪ್ರಾರಂಭಿಸಲಿದ್ದಾರೆ. ಚಂದ್ರಕಲಾ ನಿರ್ದೇಶನದ ಚಿಲ್ಲಂ 2018ರಲ್ಲಿ ಪ್ರಾರಂಭವಾಗಿ 10 ದಿನಗಳ ಚಿತ್ರೀಕರಣದ ನಂತರ  ಮೊಟಕುಗೊಂಡಿತ್ತು.

ಚಿಲ್ಲಂ ಒಂದು ಆಸಕ್ತಿದಾಯಕ ವಿಷಯವಾಗಿದೆ. ಇದು ದೊಡ್ಡ ಕ್ಯಾನ್ವಾಸ್‌ನಲ್ಲಿ ಮಾಡಿದ ನಾಯಕನ ಚಿತ್ರವಾಗಿದೆ. ಅದರಲ್ಲಿ ನನ್ನನ್ನು ಕೆಟ್ಟ ಹುಡುಗ ಅವತಾರದಲ್ಲಿ ಚಿತ್ರಿಸಲಾಗುವುದು. ಇದು ನಾನು ಅನ್ವೇಷಿಸಲು ಬಯಸುವ ಒಂದು ವಿಶಿಷ್ಟ ಪಾತ್ರವಾಗಿರುತ್ತದೆ, ಮತ್ತು ಬದಲಾವಣೆ ಆಸಕ್ತಿದಾಯಕವಾಗಿದೆ. ಹೀಗಾಗಿ ನಾನು ಈ ಚಿತ್ರವನ್ನು ಬಿಡುವುದಿಲ್ಲ ಎಂದು ಮನು ರವಿಚಂದ್ರನ್ ಹೇಳಿದ್ದಾರೆ.

ಚಿಲ್ಲಂ ಚಿತ್ರಕ್ಕೂ ಮುನ್ನ ಚಿತ್ರಕ್ಕಾಗಿ ನಾನು ಸಾಕಷ್ಟು ಶ್ರಮ ವಹಿಸಿದ್ದೆ. ಆದರೆ ಅಂದುಕೊಂಡತೆ ಚಿತ್ರೀಕರಣ ಮುಂದುವರೆಯಲಿಲ್ಲ. ಒಂದು ವಾರವಷ್ಟೆ ಚಿತ್ರೀಕರಣ ನಡೆದಿತ್ತು.  ಚಿತ್ರಕ್ಕೆ ಹೆಚ್ಚಿನ ಬಂಡವಾಳ ಬೇಕಿತ್ತು. ಆದರೆ ಭಾರೀ ಬಜೆಟ್ ಗೆ ನಿರ್ಬಂಧವಿತ್ತು. ಈ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ನನಗೆ ಹೊಸ ನಿರ್ಮಾಪಕರು ಸಿಕ್ಕಿದ್ದಾರೆ. ಅವರೊಂದಿಗೆ ನಾನು ದೂರವಾಣಿ ಚರ್ಚೆ ನಡೆಸಿದ್ದೇನೆ. ನಿರ್ದೇಶಕರನ್ನು ಶೀಘ್ರದಲ್ಲೇ ಭೇಟಿಯಾಗುತ್ತೇನೆ ಮತ್ತು ಚಿಲ್ಲಂಗಾಗಿ ಶೆಡ್ಯೂಲ್ ರೂಪಿಸುತ್ತೇನೆ ಎಂದು ಮನು ವಿವರಿಸಿದ್ದಾರೆ. ಜೊತೆಗೆ ಚಿಲ್ಲಮ್‌ಗೆ ಕನಿಷ್ಠ 120 ದಿನಗಳ ಶೂಟಿಂಗ್ ವೇಳಾಪಟ್ಟಿ ಬೇಕಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com