ಪವನ್ ಕಲ್ಯಾಣ್ ಜನ್ಮದಿನ: ಬ್ಯಾನರ್‌ ಕಟ್ಟಲು ಹೋದ ಮೂವರು ಅಭಿಮಾನಿಗಳು ವಿದ್ಯುತ್‌ ತಂತಿ ತಗುಲಿ ಸಾವು

ನಟ ಪವನ್‌ ಕಲ್ಯಾಣ್‌ ಜನ್ಮದಿನದ  ಪ್ರಯುಕ್ತ ಅವರ ಬ್ಯಾನರ್‌ ಕಟ್ಟಲು ಹೋದ ಮೂವರು ಅಭಿಮಾನಿಗಳು ವಿದ್ಯುತ್‌ ತಂತಿ ತಗುಲಿ ಮೃತಪಟ್ಟಿದ್ದಾರೆ. 
ಪವನ್ ಕಲ್ಯಾಣ್
ಪವನ್ ಕಲ್ಯಾಣ್

ಚಿತ್ತೂರು: ನಟ ಪವನ್‌ ಕಲ್ಯಾಣ್‌ ಜನ್ಮದಿನದ  ಪ್ರಯುಕ್ತ ಅವರ ಬ್ಯಾನರ್‌ ಕಟ್ಟಲು ಹೋದ ಮೂವರು ಅಭಿಮಾನಿಗಳು ವಿದ್ಯುತ್‌ ತಂತಿ ತಗುಲಿ ಮೃತಪಟ್ಟಿದ್ದಾರೆ. 

ಚಿತ್ತೂರು ಜಿಲ್ಲೆಯ ಶಾಂತಿಪುರದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ (ಸೆ.1) ರಾತ್ರಿ 8.30ರ ಸುಮಾರಿಗೆ ಪವನ್‌ ಕಲ್ಯಾಣ್‌ ಅವರ ಬ್ಯಾನರ್‌ಗಳನ್ನು ಕಟ್ಟಲಾಗುತ್ತಿತ್ತು. ಆ ವೇಳೆ ವಿದ್ಯುತ್‌ ಸ್ಪರ್ಶದಿಂದಾಗಿ ಸೋಮಶೇಖರ್‌ (30), ಅವರ ಸಹೋದರ ರಾಜೇಂದ್ರ (32), ಹಾಗೂ ಸ್ನೇಹಿತ ಅರುಣಾಚಲಂ (28) ಅಸುನೀಗಿದ್ದಾರೆ. ಇವರೆಲ್ಲರೂ ಪವನ್‌ ಕಲ್ಯಾಣ್‌ ಅಭಿಮಾನಿಗಳು ಮಾತ್ರವಲ್ಲದೆ, ಅವರ ಜನಸೇನಾ ಪಾರ್ಟಿ ಕಾರ್ಯಕರ್ತರು ಕೂಡ ಆಗಿದ್ದರು ಎನ್ನಲಾಗಿದೆ.

ಅಭಿಮಾನಿಗಳ ನಿಧನಕ್ಕೆ ಪವನ್‌ ಕಲ್ಯಾಣ್‌ ಕಂಬನಿ ಮಿಡಿದಿದ್ದಾರೆ. ಅವರ ಜನಸೇನಾ ಪಾರ್ಟಿಯ ಸೋಶಿಯಲ್‌ ಮೀಡಿಯಾ ಖಾತೆಗಳ ಮೂಲಕ ಸಂತಾಪ ಸೂಚಿಸಲಾಗಿದೆ. ಅಲ್ಲದೆ ಮೃತಪಟ್ಟ ಮೂವರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ನೀಡುವುದಾಗಿಯೂ ಜನಸೇನಾ ಪಾರ್ಟಿ ಘೋಷಿಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com