ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಮೋಹನ್ ತಿಳಿಸಿದ್ದಾರೆ.
ಅವರ ಆರೋಗ್ಯ ಸ್ಥಿತಿಗತಿ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ ವೈದ್ಯರು, ಶಿವರಾಂ ಅವರ ಮೆದುಳಿಗೆ ಮತ್ತಷ್ಟು ಹಾನಿಯಾಗಿದೆ. ಜೀವರಕ್ಷಕ ಸಪೋರ್ಟ್ ನಲ್ಲಿ ಸದ್ಯ ಇದ್ದಾರೆ. ಇನ್ನು ಅವರ ಆರೋಗ್ಯದಲ್ಲಿ ಸುಧಾರಣೆ ಆಗುವ ಭರವಸೆ ನಮಗೆ ಹೋಗಿದೆ, ಅವರ ಮೆದುಳು, ಹೃದಯ ಸ್ಪಂದಿಸುತ್ತಿಲ್ಲ, ತುಂಬಾ ಹೊತ್ತು ಅವರು ನಮ್ಮ ಜೊತೆ ಇರುವುದಿಲ್ಲ ಎನಿಸುತ್ತಿದೆ ಎಂದು ಭಾವುಕರಾಗಿ ಹೇಳಿದರು.
ಚಿಕಿತ್ಸೆ ಮುಂದುವರಿಸುತ್ತಿದ್ದೇವೆ, ಆದರೆ ಸ್ಪಂದಿಸುತ್ತಾರೆ ಎಂಬ ಆಶಾವಾದ ನಮಗೆ ಕಡಿಮೆಯಾಗುತ್ತಿದೆ, ಅವರ ಆರೋಗ್ಯ ಸುಧಾರಿಸುವುದು ತುಂಬಾ ಕಷ್ಟವಿದೆ. ಶಿವರಾಂ ಅವರ ಕುಟುಂಬಸ್ಥರು ನಮಗೆ ಸಾಧ್ಯವಾದಷ್ಟು ನಿಮ್ಮಿಂದಾದ ಪ್ರಯತ್ನ ಮಾಡಿ, ಹಿರಿಯ ಜೀವಕ್ಕೆ ಹಿಂಸೆ ನೀಡುವುದು ಬೇಡ ಎನ್ನುತ್ತಿದ್ದಾರೆ. ನಮ್ಮಿಂದಾದ ಪ್ರಯತ್ನ ಮಾಡುತ್ತೇವೆ ಎಂದರು.
ಅವರನ್ನು ಹಾಸಿಗೆಯಿಂದ ಶಿಫ್ಟ್ ಮಾಡಲು ಕಷ್ಟ, ಭಯವಾಗುತ್ತಿದೆ, ಹೀಗಾಗಿ ಎಂಆರ್ ಐ ಸ್ಕ್ಯಾನ್ ಮಾಡಲು ಸಾಧ್ಯವಾಗುತ್ತಿಲ್ಲ, ಬಿಪಿ ಮತ್ತೆ ಇಳಿಕೆಯಾಗಬಹುದು ಎಂದೆನಿಸುತ್ತದೆ, ಸದ್ಯ ಶಾಂತವಾಗಿ ಮಲಗಿದ್ದಾರೆ ಎಂದರು.
Advertisement