'ಯಜಮಾನ'ನ ಮನವಿಗೆ ಅಪಾರ ಸ್ಪಂದನೆ: ಮೃಗಾಲಯಕ್ಕೆ ಬಂದ ದೇಣಿಗೆ ಎಷ್ಟು ಗೊತ್ತೆ?

ಕೊರೋನಾ ಎರಡನೇ ಅಲೆಯ ಲಾಕ್ ಡೌನ್ ನಿಂದಾಗಿ ಎಲ್ಲ ರಾಜ್ಯದ ಮೃಗಾಲಯಗಳನ್ನು ಬಂದ್ ಮಾಡಲಾಗಿತ್ತು. ಆ ಹಿನ್ನೆಲೆಯ ಮೃಗಾಲಯ ಪ್ರಾಧಿಕಾರಕ್ಕೆ ದೊಡ್ಡ ನಷ್ಟವೇ ಉಂಟಾಗಿತ್ತು. 
ದರ್ಶನ್
ದರ್ಶನ್

ಮೈಸೂರು: ಕೊರೋನಾ ಎರಡನೇ ಅಲೆಯ ಲಾಕ್ ಡೌನ್ ನಿಂದಾಗಿ ಎಲ್ಲ ರಾಜ್ಯದ ಮೃಗಾಲಯಗಳನ್ನು ಬಂದ್ ಮಾಡಲಾಗಿತ್ತು. ಆ ಹಿನ್ನೆಲೆಯ ಮೃಗಾಲಯ ಪ್ರಾಧಿಕಾರಕ್ಕೆ ದೊಡ್ಡ ನಷ್ಟವೇ ಉಂಟಾಗಿತ್ತು. 

ಅದರಿಂದ ಪ್ರಾಣಿ-ಪಕ್ಷಿಗಳ ನಿರ್ವಹಣೆಯೂ ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಂದು ಮನವಿ ಮಾಡಿದ್ದರು. ರಾಜ್ಯದ 9 ಮೃಗಾಲಯದಲ್ಲಿರುವ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದು, ಅವುಗಳ ನಿರ್ವಹಣೆಗೆ ಸಹಾಯ ಮಾಡಿ ಎಂದು ವಿಡಿಯೋ ಮೂಲಕ ತಿಳಿಸಿದ್ದರು. 

ದರ್ಶನ್ ಮನವಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಕಳೆದ 20 ದಿನಗಳಲ್ಲಿ ಸುಮಾರು 3 ಕೋಟಿ ರು. ಹಣ ದೇಣಿಗೆಯಾಗಿ ಬಂದಿದೆ. ದರ್ಶನ್ ಕರೆ ನೀಡುತ್ತಿದ್ದಂತೆಯೇ ಅಭಿಮಾನಿಗಳಿಂದ ಲಕ್ಷ ಲಕ್ಷ ಹಣ ದೇಣಿಗೆ ರೂಪದಲ್ಲಿ ಮೃಗಾಲಯಕ್ಕೆ ಹರಿದುಬಂದಿತ್ತು. ರಾಜ್ಯದ 9 ಮೃಗಾಲಯದ ಪ್ರಾಣಿ-ಪಕ್ಷಿಗಳನ್ನು Zoos of Karnataka ಆ್ಯಪ್ ಮೂಲಕ ಸುಮಾರು 6 ಸಾವಿರ ಜನರು ದತ್ತು ಪಡೆದಿದ್ದಾರೆ. ಬರೀ ದರ್ಶನ್‌ ಅಭಿಮಾನಿಗಳು ಮಾತ್ರವಲ್ಲದೆ, ಸಿನಿಮಾ ಕಲಾವಿದರು ಕೂಡ ದತ್ತು ಪಡೆದುಕೊಂಡಿದ್ದಾರೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹಾದೇವ ಸ್ವಾಮಿ ತಿಳಿಸಿದ್ದಾರೆ.

ಇನ್ನೂ ದರ್ಶನ್ ಅವರ ಈ ಕಾರ್ಯಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಮೃಗಾಲಯಗಳನ್ನು ಬಂದ್ ಮಾಡಲಾಗಿತ್ತು. ಇದೀಗ ಅನ್‌ಲಾಕ್‌ ಶುರುವಾಗಿರುವುದರಿಂದ, ನಿಧಾನವಾಗಿ ಮೃಗಾಲಯಗಳು ತೆರೆಯುತ್ತಿವೆ. ಬೆಳಗಾವಿ, ಗದಗ, ಹಂಪಿಯ ಮೃಗಾಲಯಗಳನ್ನು ತೆರೆಯಲಾಗಿದೆ. ಕೊವಿಡ್ ಸುರಕ್ಷತಾ ಕ್ರಮಗಳೊಂದಿಗೆ ಪ್ರವಾಸಿಗರಿಗೆ ಪ್ರವೇಶ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com