ಪತಿ ರಾಮು ನಿಧನವಾದ 12 ದಿನಗಳ ಬಳಿಕ ಮನದ ಮಾತು ಹಂಚಿಕೊಂಡ ನಟಿ ಮಾಲಾಶ್ರೀ!

ಪತಿ ರಾಮು ನಿಧನವಾದ 12 ದಿನಗಳು ಕಳೆದ ಬಳಿಕ ಇದೇ ಮೊದಲ ಬಾರಿಗೆ ನಟಿ ಮಾಲಾಶ್ರೀ ಪ್ರತಿಕ್ರಿಯೆ ನೀಡಿದ್ದು, ಬಹಿರಂಗ ಪತ್ರದ ಮೂಲಕ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ.
ನಟಿ ಮಾಲಾಶ್ರೀ, ಪತಿ ರಾಮು
ನಟಿ ಮಾಲಾಶ್ರೀ, ಪತಿ ರಾಮು
Updated on

ಬೆಂಗಳೂರು: ಪತಿ ರಾಮು ನಿಧನವಾದ 12 ದಿನಗಳು ಕಳೆದ ಬಳಿಕ ಇದೇ ಮೊದಲ ಬಾರಿಗೆ ನಟಿ ಮಾಲಾಶ್ರೀ ಪ್ರತಿಕ್ರಿಯೆ ನೀಡಿದ್ದು, ಬಹಿರಂಗ ಪತ್ರದ ಮೂಲಕ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ.

ಕಳೆದ 12 ದಿನಗಳು ತುಂಬ ನೋವಿನಿಂದ ಕೂಡಿದ್ದವು. ಸಂಪೂರ್ಣ ಅಸ್ಪಷ್ಟವಾಗಿತ್ತು. ನನ್ನ ಪ್ರೀತಿಯ ಪತಿ ರಾಮು ನಿಧನದಿಂದಾಗಿ ನಮ್ಮ ಇಡೀ ಕುಟುಂಬದ ಹೃದಯ ಛಿದ್ರವಾಯಿತು. ಯಾವಾಗಲೂ ಅವರೇ ನಮ್ಮ ಬೆನ್ನೆಲುಬು. ನಮಗೆ ದಾರಿ ತೋರಿಸು ಬೆಳಕು ಅವರು ಎಂದು ಮಾಲಾಶ್ರೀ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

‘ಇಂಥ ದಾರುಣ ಪರಿಸ್ಥಿತಿಯಲ್ಲಿ ರಾಮುಗಾಗಿ ಇಡೀ ಚಿತ್ರರಂಗವೇ ಪ್ರೀತಿ ತೋರಿಸಿದೆ. ನಮಗೆ ತೋರಿದ ಬೆಂಬಲವನ್ನು ಸದಾ ಕಾಲ ಸ್ಮರಿಸುತ್ತೇವೆ. ಮಾಧ್ಯಮದವರು, ಕಲಾವಿದರು, ನಿರ್ಮಾಪಕರು, ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ರಾಮು ಜೀವನದ ಮುಖ್ಯ ಭಾಗವಾಗಿದ್ದಕ್ಕೆ ಧನ್ಯವಾದಗಳು. ಕಷ್ಟದ ಸಂದರ್ಭದಲ್ಲಿ ನಮಗಾಗಿ ಪ್ರೀತಿ ತೋರಿಸಿ ಪ್ರಾರ್ಥನೆ ಸಲ್ಲಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ತಮ್ಮ ಕುಟುಂಬದ ಪರವಾಗಿ ಮಾಲಾಶ್ರೀ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com