ಸುದೀಪ್ ಕೈರುಚಿ ಸವಿದ ತಮಿಳು ಚಿತ್ರ ನಿರ್ದೇಶಕ ವೆಂಕಟ್ ಪ್ರಭು!

ಭೇಟಿ ಬಗ್ಗೆ ಪ್ರಶ್ನಿಸಿದಾಗ ಮನ್ಕಥಾ ಚಿತ್ರ ನಿರ್ದೇಶಕ ವೆಂಕಟ್ ಪ್ರಭು ಅವರು ವಿಶೇಷವೇನಿಲ್ಲ, ಮುಂದಿನ ಪ್ರಾಜೆಕ್ಟ್ ಗಳ ಕಥೆಗಳು ಮತ್ತು ವಿಕ್ರಾಂತ್ ರೋಣ ಸಿನಿಮಾ ಕುರಿತು ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ.
ವೆಂಕಟ್ ಪ್ರಭು ಮತ್ತು ನಟ ಸುದೀಪ್
ವೆಂಕಟ್ ಪ್ರಭು ಮತ್ತು ನಟ ಸುದೀಪ್

ಬೆಂಗಳೂರು: ಜನಪ್ರಿಯ ತಮಿಳು ಸಿನಿಮಾ ನಿರ್ದೇಶಕ ವೆಂಕಟ್ ಪ್ರಭು ಸುದೀಪ್ ಅವರ ಮನೆಗೆ ಭೇಟಿ ನೀಡಿದ್ದು, ಈ ಸಂದರ್ಭ ಸುದೀಪ್ ಅವರ ಕೈರುಚಿ ಸವಿದಿದ್ದಾರೆ. ಸುದೀಪ್ ತಯಾರಿಸಿದ ಖಾದ್ಯವನ್ನು ಹಿಡಿದು ಸುದೀಪ್ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೊ ವನ್ನು ಶೇರ್ ಮಾಡಿರುವ ವೆಂಕಟ್ ಪ್ರಭು, ಸುದೀಪ್ ಅವರ ಆತಿಥ್ಯವನ್ನು ಹೊಗಳಿದ್ದಾರೆ, ಅಲ್ಲದೆ ಸುದೀಪ್ ಅವರ ಕೈ ಅಡುಗೆಯನ್ನೂ ಸಹ.

ಈ ಭೇಟಿ ಬಗ್ಗೆ ಪ್ರಶ್ನಿಸಿದಾಗ ಮನ್ಕಥಾ ಚಿತ್ರ ನಿರ್ದೇಶಕ ವೆಂಕಟ್ ಪ್ರಭು ಅವರು ವಿಶೇಷವೇನಿಲ್ಲ, ಮುಂದಿನ ಪ್ರಾಜೆಕ್ಟ್ ಗಳ ಕಥೆಗಳು ಮತ್ತು ವಿಕ್ರಾಂತ್ ರೋಣ ಸಿನಿಮಾ ಕುರಿತು ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ. ಅಲ್ಲದೆ  ನಟ ಸುದೀಪ್ ಅವರು ನಿರ್ವಹಿಸಬಹುದಾದ ಪಾತ್ರಗಳ ಬಗ್ಗೆಯೂ ಚರ್ಚೆ ನಡೆಸಿದೆವು ಎಂದಿದ್ದಾರೆ. 

ಅಭಿಮಾನಿಗಳು ತಮಿಳು ನಟ ಅಜಿತ್ ಮತ್ತು ಸುದೀಪ್ ಅವರನ್ನೊಳಗೊಂಡ ಮನ್ಕಥ ಭಾಗ-3 ಚಿತ್ರ ಮಾಡಿ ಎಂದು ವೆಂಕಟ್ ಪ್ರಭು ಅವರಲ್ಲಿ ಮನವಿ ಮಾಡಿದ್ದಾರೆ.

ನಟ ಸುದೀಪ್ ಮತ್ತು ಜಾಕೆಲಿನ್ ಫರ್ನಾಂಡಿಸ್ ಅಭಿನಯದ, ರಂಗಿ ತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನವಿರುವ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಕಾದಿದ್ದು, ಸದ್ಯ ಪೋಸ್ಟ್ ಪ್ರಾಡಕ್ಷನ್ ಕೆಲಸ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com