ನಿರ್ದೇಶಕ ಪ್ರಶಾಂತ್ ರಾಜ್ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದಾರೆ.
ತಾವು ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಸ್ವತಃ ನಿರ್ದೇಶಕ ಪ್ರಶಾಂತ್ ರಾಜ್ ವಿಡಿಯೋ ಶೇರ್ ಮಾಡುವ ಮೂಲಕ ಮಾಹಿತಿಯಿತ್ತಿದ್ದು, 'ಆಲ್ ಈಸ್ ವೆಲ್' ಎಂದು ಕ್ಯಾಪ್ಷನ್ ನೀಡಿದ್ದಾರೆ.
ಪ್ರಶಾಂತ್ ರಾಜ್ ಅವರ ಟ್ವೀಟ್ ಗೆ ನಿರ್ದೇಶಕ ಪವನ್ ಒಡೆಯರ್. ತರುಣ್ ಕಿಶೋರ್ ಸುಧೀರ್ ಸೇರಿ ಸ್ಯಾಂಡಲ್ ವುಡ್ ಗಣ್ಯರು ಪ್ರತಿಕ್ರಯಿಸಿದ್ದು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ವಿಡಿಯೋ ಶೇರ್ ಮಾಡುವ ಮೊದಲು ಪ್ರಶಾಂತ್ ರಾಜ್ ಟ್ವೀಟ್ ಮಾಡಿ, 'ನಾನು ಅಪಾಯದಿಂದ ಪಾರಾಗಿದ್ದೀನಿ. ಎರಡು ದಿನಗಳಲ್ಲಿ ನಾನು ಸಂಪೂರ್ಣವಾಗಿ ಗುಣಮುಖವಾಗುವ ಬಗ್ಗೆ ಖಚಿತವಾಗಲಿದೆ. ಆದಷ್ಟು ಬೇಗ ಹಿಂತಿರುಗುತ್ತೇನೆ. ನನ್ನ ಕೆಲಸವನ್ನು ಪ್ರಾರಂಭಮಾಡುತ್ತೇನೆ' ಎಂದಿದ್ದಾರೆ. ಆದರೆ ತಮಗೆ ಏನಾಗಿದೆ ಎಂದು ಸಂಪೂರ್ಣ ಮಾಹಿತಿ ನೀಡಿಲ್ಲ.
ಪ್ರಶಾಂತ್ ರಾಜ್ ಅವರು, ಲವ್ ಗುರು, ಗಾನ ಬಜಾನಾ, ಜೂಮ್, ದಳಪತಿ ಮತ್ತು ಆರೆಂಜ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಆರೆಂಜ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಮತ್ತೆ ಗಣೇಶ್ ಜೊತೆ ಕೆಲಸ ಮಾಡುತ್ತಿದ್ದು, ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದರು.
Advertisement