ತೆಲುಗು ಹಿರಿಯ ನಟ ಕೈಕಾಲ ಸತ್ಯ ನಾರಾಯಣ ಆರೋಗ್ಯ ಸ್ಥಿತಿ ಗಂಭೀರ

ತೆಲುಗು ಚಿತ್ರರಂಗದ  ಹಿರಿಯ ನಟ  ಕೈಕಾಲ ಸತ್ಯನಾರಾಯಣ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.  ಸದ್ಯ ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. 
ತೆಲುಗು ಹಿರಿಯ ನಟ ಕೈಕಾಲ ಸತ್ಯ ನಾರಾಯಣ
ತೆಲುಗು ಹಿರಿಯ ನಟ ಕೈಕಾಲ ಸತ್ಯ ನಾರಾಯಣ

ಹೈದರಾಬಾದ್: ತೆಲುಗು ಚಿತ್ರರಂಗದ  ಹಿರಿಯ ನಟ  ಕೈಕಾಲ ಸತ್ಯನಾರಾಯಣ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. 

ಆಸ್ಪತ್ರೆ ಬಿಡುಗಡೆಗೊಳಿಸಿರುವ ಹೆಲ್ತ್‌ ಬುಲಿಟಿನ್‌ ನಲ್ಲಿ ಹಿರಿಯ ನಟನಿಗೆ ಕಲ್ಪಿಸಲಾಗುತ್ತಿರುವ  ಚಿಕಿತ್ಸೆಗೆ ತೃಪ್ತಿಕರ ಫಲಿತಾಂಶ ದೊರೆಯುತ್ತಿಲ್ಲ ಎಂದು ಹೇಳಲಾಗಿದೆ. 

ಕಳೆದ  ತಿಂಗಳು  30 ರಂದು ಮನೆಯಲ್ಲಿ ಕಾಲು ಜಾರಿ ಬಿದ್ದು ಅಸ್ವಸ್ಥಗೊಂಡ  ಹಿರಿಯ ನಟ, ಆಸ್ಪತ್ರೆಯಲ್ಲಿ ಕೆಲವು  ದಿನ ಚಿಕಿತ್ಸೆ ಪಡೆದಿದ್ದರು. ನಂತರ ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ, ಮತ್ತೊಮ್ಮೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com