ನಾಗ ಚೈತನ್ಯ-ಸಮಂತಾ ದೂರವಾಗುತ್ತಿರುವ ಕುರಿತು ನಟ ನಾಗಾರ್ಜುನ್ ಹೇಳಿದ್ದೇನು?

ಮಗ ನಾಗ ಚೈತನ್ಯ ಮತ್ತು ಸೊಸೆ ಸಮಂತಾ ಅಕ್ಕಿನೇನಿ ವಿಚ್ಛೇಧನವನ್ನು ಘೋಷಿಸಿದ ನಂತರ ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಪ್ರತಿಕ್ರಿಯೆಸಿದ್ದು ಕುಟುಂಬಕ್ಕೆ 'ಸಮಂತಾ ಯಾವಾಗಲೂ ಪ್ರಿಯೆ' ಎಂದು ಹೇಳಿದರು.
ಸಮಂತಾ-ನಾಗ ಚೈತನ್ಯ-ನಾಗಾರ್ಜುನ
ಸಮಂತಾ-ನಾಗ ಚೈತನ್ಯ-ನಾಗಾರ್ಜುನ

ಹೈದರಾಬಾದ್: ಮಗ ನಾಗ ಚೈತನ್ಯ ಮತ್ತು ಸೊಸೆ ಸಮಂತಾ ಅಕ್ಕಿನೇನಿ ವಿಚ್ಛೇಧನವನ್ನು ಘೋಷಿಸಿದ ನಂತರ ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಪ್ರತಿಕ್ರಿಯೆಸಿದ್ದು ಕುಟುಂಬಕ್ಕೆ 'ಸಮಂತಾ ಯಾವಾಗಲೂ ಪ್ರಿಯೆ' ಎಂದು ಹೇಳಿದರು.

ಭಾರವಾದ ಹೃದಯದಿಂದ ನಾನು ಇದನ್ನು ಹೇಳುತ್ತೇನೆ! ಸ್ಯಾಮ್ ಮತ್ತು ಚಾಯ್ ನಡುವೆ ಏನೇ ನಡೆದರೂ ಅದು ದುರದೃಷ್ಟಕರ. ಹೆಂಡತಿ ಮತ್ತು ಗಂಡನ ನಡುವೆ ಏನಾಗುತ್ತದೆ ಎಂಬುದು ತುಂಬಾ ವೈಯಕ್ತಿಕವಾಗಿದೆ. ಸ್ಯಾಮ್ ಮತ್ತು ಚಾಯ್ ಇಬ್ಬರೂ ನನಗೆ ಪ್ರಿಯರು. ನನ್ನ ಕುಟುಂಬವು ಸ್ಯಾಮ್‌ನೊಂದಿಗೆ ಕಳೆದ ಕ್ಷಣಗಳನ್ನು ಯಾವಾಗಲೂ ಗೌರವಿಸುತ್ತದೆ ಮತ್ತು ಅವಳು ಯಾವಾಗಲೂ ನಮಗೆ ಪ್ರಿಯಳಾಗಿರುತ್ತಾಳೆ! ದೇವರು ಅವರಿಬ್ಬರಿಗೂ ಶಕ್ತಿಯನ್ನು ನೀಡಲಿ ಎಂದು ಅವರು ಬರೆದಿದ್ದಾರೆ.

ಚೈತನ್ಯ ಮತ್ತು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಪುಟಗಳಲ್ಲಿ  ತಾವು ದೂರವಾಗುತ್ತಿರುವುದಾಗಿ ದೃಢಪಡಿಸಿದರು. ಇಬ್ಬರು 'ತಮ್ಮದೇ ಆದ ಮಾರ್ಗಗಳನ್ನು ಅನುಸರಿಸಲು' ನಿರ್ಧರಿಸಿದ್ದಾರೆ. 'ವಿಶೇಷ ಬಾಂಡ್' ಅನ್ನು ಹಂಚಿಕೊಳ್ಳುವುದನ್ನು ಮುಂದುವರಿಸುತ್ತಾರೆ. ದಂಪತಿಯ ನಾಲ್ಕನೇ ವಿವಾಹ ವಾರ್ಷಿಕೋತ್ಸವಕ್ಕೆ ಒಂದು ವಾರ ಇರುವಾಗಲೇ ವಿಚ್ಛೇಧನವನ್ನು ಘೋಷಿಸಿದ್ದಾರೆ. 

ಚೈತನ್ಯ ಮತ್ತು ಸ್ಯಾಮ್, ಯೆ ಮಾಯಾ ಚೆಸಾವೆ, ಆಟೋನಗರ ಸೂರ್ಯ ಮತ್ತು ಮಜಿಲಿ ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದರು. ಅಕ್ಟೋಬರ್ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com