'ನೀರ್ ದೋಸೆ' ಹುಯ್ದಿದ್ದ ನಿರ್ದೇಶಕ ವಿಜಯಪ್ರಸಾದ್ 'ಪರಿಮಳ ಲಾಡ್ಜ್' ಸಿನಿಮಾಗೆ ಯೋಗಿ ನಾಯಕ

ಪರಿಮಳ ಲಾಡ್ಜ್ ಸಿನಿಮಾದಲ್ಲಿ ಸುಮನ್ ರಂಗನಾಥ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ನಾಯಕಿ ಪಾತ್ರಕ್ಕೆ ಹುಡುಕಾಟ ನಡೆದಿದೆ. ಪರಿಮಳ ಲಾಡ್ಜ್ ನಂತರ ವಿಜಯ ಪ್ರಸಾದ್ ಮತ್ತು ಯೋಗಿ ಸಿದ್ಲಿಂಗು ಪಾರ್ಟ್ 2 ಸಿನಿಮಾಗೆ ಜೊತೆಯಾಗಲಿದ್ದಾರೆ.
ವಿಜಯಪ್ರಸಾದ್, ಯೋಗಿ
ವಿಜಯಪ್ರಸಾದ್, ಯೋಗಿ

ಬೆಂಗಳೂರು: ಸಿದ್ಲಿಂಗು ನಿರ್ದೇಶಕ ವಿಜಯಪ್ರಸಾದ್ ತೋತಾಪುರಿ ಪಾರ್ಟ್1 ಮತ್ತು ಪೆಟ್ರೋಮ್ಯಾಕ್ಸ್ ಸಿನಿಮಾವನ್ನು ಕ್ರಮವಾಗಿ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಬಿಡುಗಡೆಗೊಳ್ಳುವುದನ್ನು ಎದುರು ನೋಡುತ್ತಿದ್ದಾರೆ. ಇದೇ ಸಮಯದಲ್ಲಿ ತಮ್ಮ ಮುಂದಿನ ಹೊಸ ಸಿನಿಮಾ ಪರಿಮಳ ಲಾಡ್ಜ್ ಶೂಟಿಂಗ್ ಗೆ ಸಿದ್ಧತೆ ನಡೆಸಿದ್ದಾರೆ. ನೀರ್ ದೋಸೆ ಸಿನಿಮಾದ ನಿರ್ಮಾಪಕರಾದ ಪ್ರಸನ್ನ, ಪರಿಮಳ ಲಾಡ್ಜಿಗೆ ಹಣ ಹೂಡುತ್ತಿದ್ದಾರೆ. 

ಈ ಹಿಂದೆ ಪರಿಮಳ ಲಾಡ್ಜ್ ಸಿನಿಮಾದಲ್ಲಿ ಸತೀಶ್ ನೀನಾಸಂ ಅವರು ನಟಿಸುವುದಾಗಿ ಚಿತ್ರತಂಡ ಘೋಷಿಸಿತ್ತು. ಇದೀಗ ಸತೀಶ್ ನೀನಾಸಂ ಅವರು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಎನ್ನುವ ಸುದ್ದಿ ಹೊರಬಿದ್ದಿದೆ. ಪರಿಮಳ ಲಾಡ್ಜ್ ಗೆ ನಾಯಕರಾಗಿ ಯೋಗಿ ನಟಿಸುತ್ತಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಯೋಗಿ ಮತ್ತು ವಿಜಯಪ್ರಸಾದ್ ಈ ಹಿಂದೆ ಸಿದ್ಲಿಂಗು ಸಿನಿಮದಲ್ಲಿ ಜೊತೆಯಾಗಿದ್ದರು.

ಪರಿಮಳ ಲಾಡ್ಜ್ ಸಿನಿಮಾದಲ್ಲಿ ಸುಮನ್ ರಂಗನಾಥ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ನಾಯಕಿ ಪಾತ್ರಕ್ಕೆ ಹುಡುಕಾಟ ನಡೆದಿದೆ. ಪರಿಮಳ ಲಾಡ್ಜ್ ನಂತರ ವಿಜಯ ಪ್ರಸಾದ್ ಮತ್ತು ಯೋಗಿ ಸಿದ್ಲಿಂಗು ಪಾರ್ಟ್ 2 ಸಿನಿಮಾಗೆ ಜೊತೆಯಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com