ಕಂಬ್ಲಿಹುಳ ಖ್ಯಾತಿಯ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸಲಿರುವ ಸಿನಿಮಾ ನಿರ್ದೇಶಿಸಲಿದ್ದಾರೆ ಹಯವದನ

ನಾಗಿಣಿ, ಅಗ್ನಿಸಾಕ್ಷಿ, ಕಮಲಿ, ಮಧುಬಾಲ, ಆಕಾಶ ದೀಪ ಮತ್ತು ಶುಭಮಂಗಳದಂತಹ ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸಿದ ಹಯವದನ ಇದೀಗ ಬೆಳ್ಳಿ ಪರದೆಯಲ್ಲಿ ಮೋಡಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ನಿರ್ದೇಶಕ ಹಯವದನ - ನಟ ಅಂಜನ್ ನಾಗೇಂದ್ರ
ನಿರ್ದೇಶಕ ಹಯವದನ - ನಟ ಅಂಜನ್ ನಾಗೇಂದ್ರ
Updated on

ನಾಗಿಣಿ, ಅಗ್ನಿಸಾಕ್ಷಿ, ಕಮಲಿ, ಮಧುಬಾಲ, ಆಕಾಶ ದೀಪ ಮತ್ತು ಶುಭಮಂಗಳದಂತಹ ಕಿರುತೆರೆಯ ಧಾರಾವಾಹಿಗಳನ್ನು ನಿರ್ದೇಶಿಸಿದ ಹಯವದನ ಇದೀಗ ಬೆಳ್ಳಿ ಪರದೆಯಲ್ಲಿ ಮೋಡಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಹಯವದನ ಅವರು ಕಂಬ್ಳಿಹುಳ ಖ್ಯಾತಿಯ ನಟ ಅಂಜನ್ ನಾಗೇಂದ್ರ ಅವರೊಂದಿಗೆ ಸಾಮಾಜಿಕ ಯುವ ಮನರಂಜನೆಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ.

'ಇದು ಪ್ರಯಾಣ ಆಧರಿತ ವಿಷಯವಾಗಲಿದೆ. ಇದು ತಂದೆ-ಮಗನ ಸಂಬಂಧವನ್ನು ಒತ್ತಿಹೇಳುತ್ತದೆ. ಅಂಜನ್ ನಾಗೇಂದ್ರ ಅವರ ಚೊಚ್ಚಲ ಸಿನಿಮಾದಲ್ಲಿನ ನಟನೆಯನ್ನು ನೋಡಿದ ನಂತರ ನಾನು ಅವರೊಂದಿಗೆ ಸಿನಿಮಾ ಮಾಡಲು ನಿರ್ಧರಿಸಿದೆ ಮತ್ತು ಅವರು ಈ ಪಾತ್ರಕ್ಕೆ ಸರಿಹೊಂದುತ್ತಾರೆ ಎಂದು ನಾನು ಭಾವಿಸಿದೆ. ಅಂಜನ್ ಅವರದ್ದು ತಾಜಾ ಮುಖ ಮತ್ತು ಕೇವಲ ಒಂದೇ ಒಂದು ಸಿನಿಮಾ ಮಾಡಿದ್ದಾರೆ. ಹೀಗಾಗಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಉತ್ತಮ ಎಂದು ನಾನು ಭಾವಿಸಿದೆ' ಎನ್ನುತ್ತಾರೆ ಹಯವದನ.

ಜನವರಿ ಮೊದಲ ವಾರದಲ್ಲಿ ಶೀರ್ಷಿಕೆಯನ್ನು ಬಹಿರಂಗಪಡಿಸಲು ಚಿತ್ರತಂಡ ಯೋಜಿಸಿದೆ ಮತ್ತು ಜನವರಿ ಮಧ್ಯ ಭಾಗದಲ್ಲಿ ಚಿತ್ರ ಸೆಟ್ಟೇರಲಿದೆ.

ಇನ್ನೂ ಹೆಸರಿಡದ ಈ ಸಿನಿಮಾವನ್ನು ಪೆಂಡೋರಸ್ ಬಾಕ್ಸ್ ಪ್ರೊಡಕ್ಷನ್ ಮತ್ತು ಕೃಷ್ಣಛಾಯಾ ಚಿಟಲ್ ಬ್ಯಾನರ್ ಅಡಿಯಲ್ಲಿ ಪವನ್ ಸಿಮಿಕೇರಿ ಸಹಯೋಗದೊಂದಿಗೆ ನಿರ್ಮಾಪಕರಾಗಿಯೂ ಹಯವದನ ಸಾಹಸಕ್ಕಿಳಿಯಲಿದ್ದಾರೆ.

ಚಿತ್ರತಂಡವು ತಾರಾಗಣವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ. ಚಿತ್ರಕ್ಕೆ ನಿರ್ದೇಶಕರು ರವಿಚಂದ್ರನ್ ಅವರನ್ನು ಸಂಕಲನಕಾರರಾಗಿ, ನಟರಾಜ್ ಮದ್ದಳ್ಳ ಅವರನ್ನು ಛಾಯಾಗ್ರಹಣಕ್ಕಾಗಿ ಆಯ್ಕೆ ಮಾಡಿದ್ದು, ಚಿತ್ರಕ್ಕೆ ಶಿವಪ್ರಸಾದ್ ಸಂಗೀತ ನೀಡಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com