ತೂತು ಮಡಿಕೆ ಚಿತ್ರಕ್ಕಾಗಿ ವಿಮರ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ಚಿತ್ರದ ಬರಹಗಾರ, ನಿರ್ದೇಶಕ ಮತ್ತು ನಟ ಚಂದ್ರ ಕೀರ್ತಿ ಅವರು ನಿರ್ಮಾಪಕ ಮಧುಸೂದನ್ ರಾವ್ ಅವರೊಂದಿಗೆ ಮತ್ತೊಂದು ಸಿನಿಮಾಗೆ ಮುಂದಾಗುತ್ತಿದ್ದಾರೆ. ಅಧಿಕೃತವಾಗಿ ಸಿನಿಮಾವನ್ನು ಘೋಷಿಸುವ ಮುನ್ನ ಅವರು ಸಿನಿಮಾ ಎಕ್ಸ್ಪ್ರೆಸ್ನೊಂದಿಗೆ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
ನಿರ್ಮಾಣ ಸಂಸ್ಥೆ ಸರ್ವತಾ ಸಿನಿ ಗ್ಯಾರೇಜ್ನೊಂದಿಗೆ ಇದು ಅವರ ಎರಡನೇ ಸಹಯೋಗವಾಗಿದ್ದು, ಸ್ಕ್ರಿಪ್ಟಿಂಗ್ ಹಂತದಲ್ಲಿರುವ ಈ ಸಿನಿಮಾ ಫೆಬ್ರವರಿಯಲ್ಲಿ ಸೆಟ್ಟೇರುವ ಸಾಧ್ಯತೆಯಿದೆ.
ಇದೊಂದು ‘ಲವ್ ಆ್ಯಕ್ಷನ್ ಸಿನಿಮಾ’ ಆಗಿದ್ದು, ಇಡೀ ಕಥೆಯನ್ನು ಕಾಡಿನ ಹಿನ್ನಲೆಯಲ್ಲಿ ಚಿತ್ರಿಸಲಾಗುತ್ತದೆ. ಚಿತ್ರದ ಪ್ರಮುಖ ಭಾಗಗಳನ್ನು ಹಳ್ಳಿಯ ಒಳಭಾಗದಲ್ಲಿ ಚಿತ್ರೀಕರಿಸಲಾಗುವುದು. ಈ ಚಿತ್ರಕ್ಕೆ ಕಥೆ ಮತ್ತು ನಿರ್ದೇಶನದ ಜೊತೆಗೆ ಚಂದ್ರಕೀರ್ತಿ ನಾಯಕನಾಗಿಯೂ ನಟಿಸುತ್ತಿದ್ದಾರೆ.
ಉಳಿದ ತಾರಾಗಣವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಚಿತ್ರತಂಡವಿದೆ. ತೂತು ಮಡಿಕೆ ಸಿನಿಮಾದ ಸಂಗೀತ ನಿರ್ದೇಶಕ ಸ್ವಾಮಿನಾಥನ್ ಆರ್.ಕೆ ಅವರೇ ಈ ಚಿತ್ರಕ್ಕೂ ಸಂಗೀತ ಸಂಯೋಜಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ತಂತ್ರಜ್ಞರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುತ್ತಾರೆ ಅವರು.
Advertisement