ಸಿದ್ದರಾಮಯ್ಯ ಭೇಟಿ ಮಾಡಿದ ನಟ ನೀನಾಸಂ ಸತೀಶ್; 'ಡಿಯರ್ ವಿಕ್ರಮ್' ವೀಕ್ಷಿಸಲು ಆಹ್ವಾನ

ನಟ ನಿನಾಸಂ ಸತೀಶ್ ಅಭಿನಯಿಸಿರುವ ಡಿಯರ್ ವಿಕ್ರಮ್ ಚಿತ್ರ ಇದೇ ಗುರುವಾರದಂದು ತೆರೆ ಕಾಣಲಿದೆ. ಪ್ರಚಾರದಲ್ಲಿ ಬ್ಯುಸಿಯಾಗಿರುವ ನಿನಾಸಂ ಸತೀಶ್ ಅವರು ಸೋಮವಾರ ವಿರೋಧ ಪಕ್ಷದ ನಾಯಕರಾಗಿರುವ...
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ನಟ ನೀನಾಸಂ ಸತೀಶ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ನಟ ನೀನಾಸಂ ಸತೀಶ್
Updated on

ಬೆಂಗಳೂರು: ನಟ ನಿನಾಸಂ ಸತೀಶ್ ಅಭಿನಯಿಸಿರುವ ಡಿಯರ್ ವಿಕ್ರಮ್ ಚಿತ್ರ ಇದೇ ಗುರುವಾರದಂದು ತೆರೆ ಕಾಣಲಿದೆ. ಪ್ರಚಾರದಲ್ಲಿ ಬ್ಯುಸಿಯಾಗಿರುವ ನಿನಾಸಂ ಸತೀಶ್ ಅವರು ಸೋಮವಾರ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.

ಈ ವೇಳೆ ನಿನಾಸಂ ಸತೀಶ್ ಜೂನ್ 30 ರಂದು ತೆರೆ ಕಾಣಲಿರುವ, ತಾವೇ ನಾಯಕ ನಟರಾಗಿ ಅಭಿನಯಿಸಿರುವ ಡಿಯರ್ ವಿಕ್ರಮ್ ಸಿನಿಮಾ ವೀಕ್ಷಿಸಲು ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದರು.

ಕೆ.ಎಸ್. ನಂದೀಶ್ ನಿರ್ದೇಶನದ ಈ ಸಿನಿಮಾ ನಾಯಕತ್ವದ ಪ್ರಗತಿಪರ ಆಶಯಗಳನ್ನು ಒಳಗೊಂಡಿದೆ ಎಂದು ನಿನಾಸಂ ಸತೀಶ್ ಅವರು ವಿವರಿಸಿದರು. 

ಡಿಯರ್ ವಿಕ್ರಮ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣಲೆಂದು ಹಾರೈಸಿದ ಸಿದ್ದರಾಮಯ್ಯ ಅವರು, ಇಡೀ ಚಿತ್ರ ತಂಡಕ್ಕೆ ಶುಭ ಕೋರಿದರು. ಈ ವೇಳೆ ಸಾಹಿತಿ ನಟರಾಜ್ ಹುಳಿಯಾರ್ ಸಹ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com