'ಕನ್ನಡಿಗ' ನಂತರ ಮತ್ತೆ ಒಂದಾಗುತ್ತಿದ್ದಾರೆ ರವಿಚಂದ್ರನ್-ಎನ್.ಎಸ್ ರಾಜ್ ಕುಮಾರ್!

ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ನಿರ್ಮಾಪಕ ಎನ್ ಎಸ್ ರಾಜಕುಮಾರ್ ಕನ್ನಡಿಗ ನಂತರ ಮೂರನೇ ಬಾರಿಗೆ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ.
ರವಿಚಂದ್ರನ್ ಮತ್ತು ಎನ್ ಎಸ್ ರಾಜಶೇಖರ್
ರವಿಚಂದ್ರನ್ ಮತ್ತು ಎನ್ ಎಸ್ ರಾಜಶೇಖರ್
Updated on

ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ನಿರ್ಮಾಪಕ ಎನ್ ಎಸ್ ರಾಜಕುಮಾರ್ ಕನ್ನಡಿಗ ನಂತರ ಮೂರನೇ ಬಾರಿಗೆ ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ.

ತಮಿಳು ನಿರ್ದೇಶಕ ಅನೀಶ್ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಅನೀಶ್ ಈ ಹಿಂದೆ ಹಲವು ಸಿನಿಮಾ ಮತ್ತು ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ.

ಚಿತ್ರಕ್ಕೆ ಕಾರ್ತಿಕೇಯನ್ ಸಂಗೀತ ಸಂಯೋಜಿಸಲಿದ್ದು, ಸತೀಶ್ ಛಾಯಾಗ್ರಹಣವನ್ನು ನಿರ್ವಹಿಸಲಿದ್ದಾರೆ.

ಆಪ್ತ ಮೂಲಗಳ ಪ್ರಕಾರ, ಈ ಯೋಜನೆಯು ಫ್ಯಾಮಿಲಿ ಎಂಟರ್ಟೈನರ್ ಆಗಿದ್ದು, ರವಿಚಂದ್ರನ್ ಅವರು  ತಮ್ಮ ವೃತ್ತಿಜೀವನದಲ್ಲಿ ಹಿಂದೆಂದೂ ನಿರ್ವಹಿಸದ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಡಿಸೆಂಬರ್‌ನಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದ್ದು, ನಿರ್ಮಾಪಕರು ಕಾಸ್ಟಿಂಗ್ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ.

ರಿಷಿಕಾ ಶರ್ಮಾ ನಿರ್ದೇಶನದ ವಿಜಯಾನಂದ್ ಜೀವನಚರಿತ್ರೆಯಲ್ಲಿ ಹಾಗೂ ದರ್ಶನ್ ಅಭಿನಯದ ಕ್ರಾಂತಿ  ಚಿತ್ರದಲ್ಲಿ ರವಿಚಂದ್ರನ್ ನಟಿಸಿದ್ದು  ಬಿಡುಗಡೆಗೆ ಸಿದ್ಧವಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com