ತಾರಾ ದಂಪತಿ ಬಾಬುರಾಜ್-ವಾಣಿ ವಿಶ್ವನಾಥ್ ವಿರುದ್ಧ 3.14 ಕೋಟಿ ರೂ. ವಂಚನೆ ಪ್ರಕರಣ ದಾಖಲು!

ತ್ರಿಶೂರ್ ಜಿಲ್ಲೆಯ ತಿರುವಿಲ್ವಾಮಲ ಮೂಲದ ರಿಯಾಜ್ ಗೆ ವಂಚನೆ ಆರೋಪ ಸಂಬಂಧ ತಾರಾ ದಂಪತಿ ಬಾಬುರಾಜ್ ಮತ್ತು ವಾಣಿ ವಿಶ್ವನಾಥ್ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಾಣಿ ವಿಶ್ವನಾಥ್-ಬಾಬುರಾಜ್
ವಾಣಿ ವಿಶ್ವನಾಥ್-ಬಾಬುರಾಜ್

ಪಾಲಕ್ಕಾಡ್: ತ್ರಿಶೂರ್ ಜಿಲ್ಲೆಯ ತಿರುವಿಲ್ವಾಮಲ ಮೂಲದ ರಿಯಾಜ್ ಗೆ ವಂಚನೆ ಆರೋಪ ಸಂಬಂಧ ತಾರಾ ದಂಪತಿ ಬಾಬುರಾಜ್ ಮತ್ತು ವಾಣಿ ವಿಶ್ವನಾಥ್ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಬುರಾಜ್ ಮತ್ತು ವಾಣಿ ವಿಶ್ವನಾಥ್ ಇಬ್ಬರೂ ಸಿನಿಮಾ ಮಾಡುವ ನೆಪದಲ್ಲಿ 3.14 ಕೋಟಿ ರೂಪಾಯಿ ಸಾಲ ಪಡೆದಿದ್ದರು ಎಂದು ರಿಯಾಜ್ ದೂರಿದ್ದರು. ಕುಡಸ ಸಿನಿಮಾ ನಿರ್ಮಾಣಕ್ಕೆ ಬಾಬುರಾಜ್ ರಿಯಾಜ್ ರಿಂದ 3.14 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ದೂರು ದಾಖಲಾಗಿತ್ತು.

2017ರಲ್ಲಿ ಈ ಮೊತ್ತದ ಹಣವನ್ನು ದಂಪತಿಯ ಬ್ಯಾಂಕ್ ಖಾತೆಗಳಿಗೆ ವಿವಿಧ ಹಂತಗಳಲ್ಲಿ ವರ್ಗಾಯಿಸಿದ್ದಾಗಿ ರಿಯಾಜ್ ತಿಳಿಸಿದ್ದಾರೆ. ತ್ರಿಶೂರ್ ಮತ್ತು ಕೊಚ್ಚಿಯಲ್ಲಿ ಚಿತ್ರದ ಮಾತುಕತೆ ನಡೆದಿತ್ತು. ಚಿತ್ರ ಬಿಡುಗಡೆಯಾದ ನಂತರ ಹಣ ಮತ್ತು ಲಾಭದ ಪಾಲು ಹಿಂತಿರುಗಿಸುವುದಾಗಿ ಒಪ್ಪಂದವಾಗಿತ್ತು. ಮಾತಿನಂತೆ ನಡೆದುಕೊಳ್ಳದ ಕಾರಣ ರಿಯಾಜ್ ಪಾಲಕ್ಕಾಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಪ್ರಾಥಮಿಕ ತನಿಖೆಯ ನಂತರ, ದೂರನ್ನು ಒಟ್ಟಪ್ಪಲಂ ಪೊಲೀಸ್ ಠಾಣೆಗೆ ವರ್ಗಾಹಿಸಲಾಗಿದೆ. ಒಟ್ಟಪ್ಪಲಂನಲ್ಲಿರುವ ಬ್ಯಾಂಕ್‌ನಿಂದ ವಹಿವಾಟು ನಡೆದಿದ್ದು, ಒಟ್ಟಪಾಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳದ ಆಲುವಾದ ಅಶೋಕಪುರಂ ನಿವಾಸಿಯಾದ ಬಾಬುರಾಜ್ ಸಾಲ್ಟ್ ಅಂಡ್ ಪೆಪ್ಪರ್, ಜೋಜಿ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಗಮನಾರ್ಹ ನಟರಾಗಿದ್ದರು. ಪತ್ನಿ ವಾಣಿ ವಿಶ್ವನಾಥ್ ತ್ರಿಶೂರ್‌ನ ಒಲ್ಲೂರ್‌ನವರಾಗಿದ್ದು ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಪ್ರಮುಖ ನಟಿಯಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com