'ರಾಜು ಕನ್ನಡ ಮೀಡಿಯಂ' ನಿರ್ದೇಶಕ ನರೇಶ್ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ 'ಅವನು ಮತ್ತು ಶ್ರಾವಣಿ' ನಟ ಸಾರ್ಥಕ್ ನಾಯಕ

ಫಸ್ಟ್ ರ್ಯಾಂಕ್ ರಾಜು ಮತ್ತು ರಾಜು ಕನ್ನಡ ಮೀಡಿಯಂನ ನಿರ್ದೇಶಕ ನರೇಶ್ ಕುಮಾರ್ ತಮ್ಮ ಮೂರನೇ ಪ್ರಾಜೆಕ್ಟ್‌ಗೆ ಸಿದ್ಧರಾಗಿದ್ದಾರೆ. 'ಸೌತ್ ಇಂಡಿಯನ್ ಹೀರೋ' ಎಂಬ ಶೀರ್ಷಿಕೆಯ ಈ ಚಿತ್ರ 'ಅವನು ಮತ್ತು ಶ್ರಾವಣಿ' ಎಂಬ ಧಾರಾವಾಹಿಯಲ್ಲಿ ನಟಿಸಿದ್ದ ಸಾರ್ಥಕ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಲಿದೆ.
ನಟ ಸಾರ್ಥಕ್
ನಟ ಸಾರ್ಥಕ್

ಫಸ್ಟ್ ರ್ಯಾಂಕ್ ರಾಜು ಮತ್ತು ರಾಜು ಕನ್ನಡ ಮೀಡಿಯಂನ ನಿರ್ದೇಶಕ ನರೇಶ್ ಕುಮಾರ್ ತಮ್ಮ ಮೂರನೇ ಪ್ರಾಜೆಕ್ಟ್‌ಗೆ ಸಿದ್ಧರಾಗಿದ್ದಾರೆ. 'ಸೌತ್ ಇಂಡಿಯನ್ ಹೀರೋ' ಎಂಬ ಶೀರ್ಷಿಕೆಯ ಈ ಚಿತ್ರ 'ಅವನು ಮತ್ತು ಶ್ರಾವಣಿ' ಎಂಬ ಧಾರಾವಾಹಿಯಲ್ಲಿ ನಟಿಸಿದ್ದ ಸಾರ್ಥಕ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಲಿದೆ. ಸೌತ್ ಇಂಡಿಯನ್ ಹೀರೋ ಚಿತ್ರದ ಶೂಟಿಂಗ್ ಮುಗಿದಿದ್ದು, ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ.

ಸೌತ್ ಇಂಡಿಯನ್ ಹೀರೋ ದಕ್ಷಿಣ ಭಾರತದ ಚಲನಚಿತ್ರೋದ್ಯಮವನ್ನು ಆಧರಿಸಿದ್ದು, ಚಿತ್ರವು ದಕ್ಷಿಣ ಭಾರತದ ಬಹಳಷ್ಟು ನಾಯಕರ ಛಾಯೆಯನ್ನು ತರುತ್ತದೆ. 'ಇದೊಂದು ವಿಭಿನ್ನ ರೀತಿಯ ಕಥೆಯಾಗಿದ್ದು, ಫಸ್ಟ್ ಲುಕ್ ಇಂದು ಹೊರಬರುತ್ತಿದೆ' ಎಂದು ನರೇಶ್ ಹೇಳುತ್ತಾರೆ.

ಸೌತ್ ಇಂಡಿಯನ್ ಹೀರೋ ಸಿನಿಮಾದಲ್ಲಿ ಕಾಶಿಮಾ ರಫಿ (ಕಸ್ತೂರಿ ಮಹಲ್) ಮತ್ತು ಊರ್ವಶಿ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಯೋಗರಾಜ್ ಭಟ್, ವಿಜಯ್ ಚೆಂಡೂರ್, ಅಶ್ವಿನ್ ಪಾಲಕ್ಕಿ, ಅಮಿತ್, ಅಶ್ವಿನ್ ಕೊಡಂಗೆ, ಚಿತ್ಕಲಾ ಬಿರಾದಾರ್ ಮುಂತಾದವರಿದ್ದಾರೆ.

ರಿಯಾಂಶಿ ಫಿಲ್ಮ್ಸ್ ಅಡಿಯಲ್ಲಿ ಶಿಲ್ಪಾ ಎಲ್ಎಸ್ ಅವರ ನಿರ್ಮಾಣದೊಂದಿಗೆ, ಸೌತ್ ಇಂಡಿಯನ್ ಹೀರೋ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ನರೇಶ್ ಕುಮಾರ್ ಬರೆದಿದ್ದಾರೆ. ಚಿತ್ರಕ್ಕೆ ಪ್ರವೀಣ್ ಮತ್ತು ರಾಜಶೇಖರ್ ಅವರ ಛಾಯಾಗ್ರಹಣವಿದೆ. ಹರ್ಷವರ್ಧನ್ ರಾಜ್ ಮತ್ತು ಅನಿಲ್ ಸಿಜೆ ಸಂಗೀತ ಸಂಯೋಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com