ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಸಿನಿಮಾ ಕೆಜಿಎಫ್‌ಗಿಂತ ಭಿನ್ನ: ನಿರ್ಮಾಪಕ ವಿಜಯ್ ಕಿರಗಂದೂರು

ಕಾಂತಾರ ಸಿನಿಮಾ ತಮ್ಮ ಹಿಂದಿನ ಚಿತ್ರ ಕೆಜಿಎಫ್‌ಗಿಂತ ಭಿನ್ನವಾಗಿದೆ. ಕೆಜಿಎಫ್ ಚಿನ್ನದ ಗಣಿಯ ಹಿನ್ನೆಲೆಯಲ್ಲಿ ನಡೆದರೆ, ಕಾಂತಾರವು ಗ್ರಾಮೀಣ ಒಳನಾಡಿನಲ್ಲಿ ನಡೆಯುವ ಪರಿಸರದ ಸಿನಿಮಾವಾಗಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳುತ್ತಾರೆ.
ಕಾಂತಾರ ಚಿತ್ರದ ಪೋಸ್ಟರ್
ಕಾಂತಾರ ಚಿತ್ರದ ಪೋಸ್ಟರ್
Updated on

ಹೊಂಬಾಳೆ ಫಿಲ್ಮಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ, ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಸಿನಿಮಾ ಸೆಪ್ಟೆಂಬರ್ 30 ರಂದು ಸಜ್ಜಾಗುತ್ತಿದೆ. ಚಿತ್ರದಲ್ಲಿ ಕರಾವಳಿ ಭಾಗದ ಚೈತನ್ಯ ಮತ್ತು ಸಂಸ್ಕೃತಿಯನ್ನು ಹಿಡಿದಿಡುವ ಕೆಲವನ್ನು ನಿರ್ದೇಶಕರು ಮಾಡಿದ್ದಾರೆ. ಕಾಂತಾರ ಸಿನಿಮಾವನ್ನು ಬಹು ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿರುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರು ತಿಳಿಸುತ್ತಾರೆ.

ಕಾಂತಾರ ಸಿನಿಮಾ ತಮ್ಮ ಹಿಂದಿನ ಚಿತ್ರ ಕೆಜಿಎಫ್‌ಗಿಂತ ಭಿನ್ನವಾಗಿದೆ. ಕೆಜಿಎಫ್ ಚಿನ್ನದ ಗಣಿಯ ಹಿನ್ನೆಲೆಯಲ್ಲಿ ನಡೆದರೆ, ಕಾಂತಾರವು ಗ್ರಾಮೀಣ ಒಳನಾಡಿನಲ್ಲಿ ನಡೆಯುವ ಪರಿಸರದ ಸಿನಿಮಾವಾಗಿದೆ. ಈ ಚಿತ್ರವು ಕರಾವಳಿ ಕರ್ನಾಟಕದ ಆಕರ್ಷಕ ಭೂಪ್ರದೇಶಗಳ ಪವಿತ್ರ ಪದ್ಧತಿಗಳು, ಸಂಪ್ರದಾಯಗಳು, ಗುಪ್ತ ನಿಧಿಗಳು ಮತ್ತು ಪೀಳಿಗೆಯ ರಹಸ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ವಿಜಯ್ ಹೇಳುತ್ತಾರೆ.

<strong>ವಿಜಯ್ ಕಿರಗಂದೂರು</strong>
ವಿಜಯ್ ಕಿರಗಂದೂರು

ವೇಗದ ಕಥೆಯೊಂದಿಗೆ ಹೆಣೆದುಕೊಂಡಿರುವ ವಿಲಕ್ಷಣವಾದ ಉಸಿರುಕಟ್ಟಿಸುವಂತ ದೃಶ್ಯಗಳು  ಸಸ್ಪೆನ್ಸ್  ಅನ್ನು ಪ್ರಚೋದಿಸುತ್ತವೆ. ಇದಲ್ಲದೆ, ಕಥೆಯು ಜಾನಪದದ ಅಂಶಗಳನ್ನು ಹೊಂದಿದೆ. ಈ ಚಿತ್ರದಲ್ಲಿ ಕಥೆಯೇ ರಾಜನಂತೆ. ಯಾವುದೇ ಸಿನಿಮಾವನ್ನು ನಿರ್ಮಾಣ ಮಾಡುವಾಗ ನಿರ್ದೇಶಕರಿಗೆ ಸಂಪೂರ್ಣ ಸೃಜನಶೀಲ ಸ್ವಾತಂತ್ರ್ಯವನ್ನು ನೀಡುತ್ತೇನೆ. ಶೂಟಿಂಗ್‌ಗೆ ಸಂಬಂಧಿಸಿದ ದೈನಂದಿನ ಬೆಳವಣಿಗೆಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ರಿಷಭ್ ಶೆಟ್ಟಿ ಬಗ್ಗೆ ಮಾತನಾಡಿದ ವಿಜಯ್, 'ಅವರು ರಾಷ್ಟ್ರ ಪ್ರಶಸ್ತಿ ವಿಜೇತರು! ನಾನು ಅವರ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ರಿಷಬ್ ಸಿನಿಮಾದ ಬಗ್ಗೆ ಅಪಾರ ಒಲವು ಹೊಂದಿರುವ ಕಲಾವಿದ. ಅವರು ನಿರ್ದೇಶಿಸಿದ ಮತ್ತು ನಟಿಸಿದ ಗರುಡ ಗಮನ ವೃಷಭ ವಾಹನವು ಅದ್ಭುತವಾಗಿತ್ತು ಎಂದು ಹೇಳುತ್ತಾರೆ.

ಚಿತ್ರದಲ್ಲಿ ರಿಷಭ್ ಅವರ ಹೊಸ ಮುಖ ಕಾಣಬಹುದು. ಹೊಂಬಾಳೆ ಬ್ಯಾನರ್‌ನ ಮುಂಬರುವ ಮತ್ತೊಂದು ಸಿನಿಮಾದ ಬಗ್ಗೆ ಮಾತನಾಡಿದ ವಿಜಯ್, 'ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಶೂಟಿಂಗ್ ನಡೆಯುತ್ತಿದೆ ಮತ್ತು ವಿದೇಶದಲ್ಲಿ ಚಿತ್ರೀಕರಣ ಮಾಡಲು ಯೋಜಿಸಲಾಗಿದೆ. ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಕೂಡ ನಮ್ಮ ಮುಂದಿದೆ. ಈ ವರ್ಷ ನಾವು ಇನ್ನೂ ಮೂರು ಹೆಸರಿಡದ ಚಲನಚಿತ್ರಗಳ ನಿರ್ಮಾಣವನ್ನು ಹೊಂದಿದ್ದೇವೆ ಮತ್ತು ಒಟ್ಟಾರೆಯಾಗಿ ನಾವು 14 ಚಲನಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಮುಂದಿನ ವರ್ಷದಿಂದ ಹೊಸ ಪ್ಯಾನ್ ಇಂಡಿಯಾ ಸಿನಿಮಾದ ಚಿತ್ರೀಕರಣವನ್ನು ಕೂಡ ಪ್ರಾರಂಭಿಸುತ್ತೇವೆ ಎಂಬ ಭರವಸೆಯಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com