ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಜೈಲರ್ ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ. ಹೀಗಾಗಿ, ಆ ವಾರದಲ್ಲಿ ಯಾವುದೇ ಕನ್ನಡ ಚಿತ್ರಗಳು ತಮ್ಮ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಆದರೆ, 'ತೋತಾಪುರಿ 2' ಸಿನಿಮಾ ಈ ಟ್ರೆಂಡ್ ಅನ್ನು ಮುರಿದು ಈಗ ಆಗಸ್ಟ್ 11ರಂದು ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಮೂಲಕ ಬಾಕ್ಸ್ ಆಫೀಸ್ನಲ್ಲಿ ಸ್ಪರ್ಧೆಗೆ ಸಿದ್ಧವಾಗಿದೆ.
ವಿಜಯ ಪ್ರಸಾದ್ ನಿರ್ದೇಶಿಸಿದ ತೋತಾಪುರಿಯ ಮೊದಲ ಭಾಗವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿತ್ತು. ಸಮುದಾಯದ ಯೋಗಕ್ಷೇಮದ ಬಗೆಗಿನ ಕಥಾಹಂದರದೊಂದಿಗೆ ನಟರಾದ ಜಗ್ಗೇಶ್ ಮತ್ತು ಧನಂಜಯ್ ಚಿತ್ರದಲ್ಲಿ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ತೋತಾಪುರಿ 2 ಚಿತ್ರ ಇದೀಗ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇನ್ನು ಚಿತ್ರದಲ್ಲಿ ನಟಿಯರಾದ ಅದಿತಿ ಪ್ರಭುದೇವ ಮತ್ತು ಸುಮನ್ ರಂಗನಾಥ್ ಕೂಡ ಇದ್ದಾರೆ.
ತೋತಾಪುರಿಯ ಮೊದಲ ಭಾಗದಲ್ಲಿ 'ಬಾಗ್ಲು ತೆಗಿ ಮೇರಿ ಜಾನ್' ಎಂಬ ಶೀರ್ಷಿಕೆಯ ಹಾಡು ಹಿಟ್ ಆಗಿತ್ತು. ಇದೀಗ ತೋತಾಪುರಿ-2 ಚಿತ್ರದ ಮೊದಲ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಧನಂಜಯ್ ಮತ್ತು ಸುಮನ್ ರಂಗನಾಥ್ ಅವರನ್ನು ಒಳಗೊಂಡಿರುವ 'ಮೊದಲ ಮಳೆ ಮನದೊಳಗೆ ಸುರಿದಿದೆ...' ಎಂಬ ಸುಮಧುರ ಗೀತೆಯನ್ನು ಸಂಜಿತ್ ಹೆಗ್ಡೆ ಹಾಡಿದ್ದು, ಈ ಹಾಡು ಈಗಾಗಲೇ ಸಂಗೀತ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಚಿತ್ರವನ್ನು ಸುರೇಶ್ ಕೆಎ ನಿರ್ಮಿಸಿದ್ದು, ತೋತಾಪುರಿ 2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗಿದೆ. 'ಎರಡನೇ ಭಾಗ ರೋಮಾಂಚನಕಾರಿಯಾಗಿದೆ'. ಇದೊಂದು ತಪ್ಪಿಸಿಕೊಳ್ಳಲು ಬಯಸದ ಸಿನಿಮಾ ಅನುಭವವನ್ನು ನೀಡುತ್ತದೆ ಎನ್ನುತ್ತದೆ ಚಿತ್ರತಂಡ.
Advertisement