ಹೈ-ಎಂಡ್ ಬೈಕ್ ಸವಾರಿ ಮೂಲಕ ಅಕ್ಷಿತಾ ಸತ್ಯನಾರಾಯಣ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ!

ಮಾಡೆಲ್ ಕಮ್ ನಟಿ ಅಕ್ಷಿತಾ ಸತ್ಯನಾರಾಯಣ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಭರತ್ ವಿಷ್ಣುಕಾಂತ್ ಅವರ 'ರೇಸರ್' ಚಿತ್ರದಲ್ಲಿ ಅವರು ನಟಿಸಲಿದ್ದಾರೆ. ಈ ಚಿತ್ರದಲ್ಲಿ ಅವರು ಬೈಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಕ್ಷಿತಾ ಸತ್ಯನಾರಾಯಣ
ಅಕ್ಷಿತಾ ಸತ್ಯನಾರಾಯಣ
Updated on

ಮಾಡೆಲ್ ಕಮ್ ನಟಿ ಅಕ್ಷಿತಾ ಸತ್ಯನಾರಾಯಣ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಭರತ್ ವಿಷ್ಣುಕಾಂತ್ ಅವರ 'ರೇಸರ್' ಚಿತ್ರದಲ್ಲಿ ಅವರು ನಟಿಸಲಿದ್ದಾರೆ. ಈ ಚಿತ್ರದಲ್ಲಿ ಅವರು ಬೈಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬೈಕ್ ರೇಸಿಂಗ್ ಕುರಿತ ನೈಜ ಘಟನೆಯನ್ನು ಆಧರಿಸಿರುವ ಈ ಚಿತ್ರದ ಶೇ 35 ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರತಂಡ ಇತ್ತೀಚೆಗೆ ಅಕ್ಷಿತಾ ಸತ್ಯನಾರಾಯಣ ಅವರ ಮೋಷನ್ ಪೋಸ್ಟರ್ ಅನ್ನು ಅನಾವರಣಗೊಳಿಸಿದೆ.

ಸಿನಿಮಾ ಎಕ್ಸ್‌ಪ್ರೆಸ್‌ ಜೊತೆಗಿನ ಸಂದರ್ಶನದಲ್ಲಿ ಅಕ್ಷಿತಾ, ಚಿಕ್ಕ ವಯಸ್ಸಿನಲ್ಲಿಯೇ ಅಗತ್ಯ ಕೌಶಲ್ಯಗಳನ್ನು ಕಲಿಸಿದ ತನ್ನ ತಂದೆಗೆ ಧನ್ಯವಾದ ಅರ್ಪಿಸುವ ಅವರು, ಬೈಕ್ ಸವಾರಿಯ ಮೂಲಭೂತ ಅಂಶಗಳನ್ನು ತಿಳಿದುಕೊಂಡಿದ್ದೇನೆ ಎಂದು ಬಹಿರಂಗಪಡಿಸುತ್ತಾರೆ. 

'ಎನ್‌ಸಿಸಿ ಕೆಡೆಟ್ ಮತ್ತು ಅಥ್ಲೀಟ್ ಆಗಿರುವ ನನ್ನ ಹಿನ್ನೆಲೆಯು ಬೈಕ್ ರೈಡಿಂಗ್‌ನಲ್ಲಿ ಕೌಶಲ್ಯವನ್ನು ಬೆಳೆಸುವಲ್ಲಿ ನನಗೆ ಸಹಾಯ ಮಾಡಿದೆ. ಆದರೆ, ಚಿತ್ರಕ್ಕೆ ನಾನು ಸೂಪರ್‌ಬೈಕ್ ಓಡಿಸಬೇಕಾಗಿದೆ. ಹಾಗಾಗಿ ಜುಲೈನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ಮೊದಲು ನಾನು ಸದ್ಯ ಹೈ-ಎಂಡ್ ಬೈಕ್‌ಗಳನ್ನು ಕಂಫರ್ಟ್ ಆಗಿ ಓಡಿಸಲು ಕಲಿಯುತ್ತಿದ್ದೇನೆ' ಎಂದು ಆಡಿಷನ್‌ ಮೂಲಕ ಆಯ್ಕೆಯಾದ ಖುಷಿಯಲ್ಲಿರುವ ಅಕ್ಷಿತಾ ಹೇಳುತ್ತಾರೆ.

ತಂಡವು ಕಾಸ್ಟಿಂಗ್‌ಗೆ ಕರೆ ನೀಡಿತ್ತು ಮತ್ತು ನನ್ನ ಪೋರ್ಟ್‌ಫೋಲಿಯೊವನ್ನು ಸಲ್ಲಿಸಲು ಮುಂದಾದೆ. ನಟನೆಯ ವಿಡಿಯೋಗಳೊಂದಿಗೆ, ಬೈಕ್ ರೈಡಿಂಗ್ ಕೌಶಲ್ಯವನ್ನು ತೋರಿಸಿದೆ. ಅದು ತಂಡದ ಗಮನವನ್ನು ಸೆಳೆಯಿತು ಎನ್ನುವ ಅಕ್ಷಿತಾ, ತಮ್ಮ ಬಹುಕಾಲದ ಕನಸು ನಟನೆಯನ್ನು ಮುಂದುವರಿಸುವ ಮತ್ತು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುವ ಉತ್ಸಾಹವನ್ನು ವ್ಯಕ್ತಪಡಿಸುತ್ತಾರೆ. ನಾನು ವಿಶೇಷವಾಗಿ ಪೌರಾಣಿಕ ಪಾತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದು ಅವರು ಸೇರಿಸುತ್ತಾರೆ.

ಜುಲೈನಲ್ಲಿ ಪ್ರಾರಂಭವಾಗಲಿರುವ ಮುಂದಿನ ಶೆಡ್ಯೂಲ್‌ನಲ್ಲಿ ನಾಯಕಿಯ ಭಾಗಗಳು ಮತ್ತು ಹಾಡುಗಳ ಚಿತ್ರೀಕರಣ ಪುನರಾರಂಭವಾಗಲಿದೆ. ಭಾರತ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಯೋಜನೆಯನ್ನು ನಿರ್ಮಿಸುತ್ತಿರುವ ಭರತ್ ವಿಷ್ಣುಕಾಂತ್ ಅವರು ಸಂದೇಶ್ ಪ್ರಸನ್ನ, ಯಶ್ ಶೆಟ್ಟಿ, ಜಿರಳೆ ಸುಧಿ, ಬಾಲ ರಾಜವಾಡಿ, ಕಾಮಿಡಿ ಕಿಲಾಡಿಗಳು ಸೂರಜ್, ಸ್ವಾತಿ ಸೇರಿದಂತೆ ಅನೇಕರನ್ನು ಒಟ್ಟುಗೂಡಿಸಿದ್ದಾರೆ. 

ಹೆಚ್ಚುವರಿಯಾಗಿ, ಚಿತ್ರದಲ್ಲಿ ಮಹತ್ವದ ಪಾತ್ರಗಳನ್ನು ನಿರ್ವಹಿಸಲು ತಂಡವು ಮಲಯಾಳಂ ಮತ್ತು ಕನ್ನಡ ಚಿತ್ರರಂಗದ ಇಬ್ಬರು ಪ್ರಮುಖ ತಾರೆಯರನ್ನು ಸಂಪರ್ಕಿಸಿದೆ. ರೇಸರ್‌ಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಮೈಸೂರು ಸ್ವಾಮಿ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com