ಯಶ್ 'ರಾಖಿ ಭಾಯ್' ಪಾತ್ರವನ್ನು ಕೆಟ್ಟ ಪದದಿಂದ ಟೀಕಿಸಿದ ತೆಲುಗು ನಿರ್ದೇಶಕ; ಅಭಿಮಾನಿಗಳ ಆಕ್ರೋಶ!

ಕೇರ್ ಆಫ್ ಕಂಚರಪಾಲೆಂ ಮತ್ತು ಮಾಡರ್ನ್ ಲವ್ ಹೈದರಾಬಾದ್‌ನಂತಹ ಒಂದೆರೆಡು ಚಿತ್ರಗಳನ್ನು ನಿರ್ದೇಶಿಸಿರುವ ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ಎಂಬಾತ ಕನ್ನಡದ ಸಾರ್ವಕಾಲಿಕ ಚಿತ್ರ ಕೆಜಿಎಫ್ 2 ಮತ್ತು ಯಶ್‌ನ ರಾಕಿ ಪಾತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಯಶ್-ವೆಂಕಟೇಶ್ ಮಹಾ
ಯಶ್-ವೆಂಕಟೇಶ್ ಮಹಾ
Updated on

ಕೇರ್ ಆಫ್ ಕಂಚರಪಾಲೆಂ ಮತ್ತು ಮಾಡರ್ನ್ ಲವ್ ಹೈದರಾಬಾದ್‌ನಂತಹ ಒಂದೆರೆಡು ಚಿತ್ರಗಳನ್ನು ನಿರ್ದೇಶಿಸಿರುವ ತೆಲುಗು ನಿರ್ದೇಶಕ ವೆಂಕಟೇಶ್ ಮಹಾ ಎಂಬಾತ ಕನ್ನಡದ ಸಾರ್ವಕಾಲಿಕ ಚಿತ್ರ ಕೆಜಿಎಫ್ 2 ಮತ್ತು ಯಶ್‌ನ ರಾಕಿ ಪಾತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಇತರ ಚಲನಚಿತ್ರ ನಿರ್ಮಾಪಕರು- ಇಂದ್ರಗಂಟಿ ಮೋಹನ ಕೃಷ್ಣ, ನಂದಿನಿ ರೆಡ್ಡಿ, ಶಿವ ನಿರ್ವಾಣ, ಮತ್ತು ವಿವೇಕ್ ಆತ್ರೇಯ ಅವರೊಂದಿಗಿನ ಸಂದರ್ಶನದಲ್ಲಿ, ವೆಂಕಟೇಶ್ ಮಹಾ ಪ್ರಶಾಂತ್ ನೀಲ್ ಅವರ ಮ್ಯಾಗ್ನಮ್ ಆಪಸ್ ಕೆಜಿಎಫ್ 2 ನಲ್ಲಿ ತಮಾಷೆ ಮಾಡಿದರು. ಅವರು ನಾಯಕ ಯಶ್ ಅವರ ರಾಕಿ ಭಾಯ್ ಪಾತ್ರವನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ.

ಕೆಜಿಎಫ್ 2 ಬಗ್ಗೆ ವೆಂಕಟೇಶ್ ಮಹಾ ಕೆಟ್ಟದಾಗಿ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗವನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಕನ್ನಡಿಗರು ಮಾತ್ರವಲ್ಲದೆ ತೆಲುಗು ಜನರೇ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸಂದರ್ಶನದಲ್ಲಿ ನಿರ್ದೇಶಕ ವೆಂಕಟೇಶ್ ಮಹಾ ಸಿನಿಮಾದ ಹೆಸರನ್ನು ಹೇಳಲಿಲ್ಲ. ಆದರೆ ಅವರು ವಿವರಿಸಿರುವ ಕಥೆಯ ಎಳೆಯನ್ನು ಕೇಳಿದರೆ ಕೆಜಿಎಫ್ 2 ಸಿನಿಮಾದ ಬಗ್ಗೆ ಹೇಳುತ್ತಿರುವುದು ಸ್ಪಷ್ಟವಾಗುತ್ತದೆ. ಇದೇ ಸಂದರ್ಶನದಲ್ಲಿ ಭಾಗಿಯಾಗಿದ್ದ ಇತರ ನಿರ್ದೇಶಕರು ಕೂಡ ಅವರ ಮಾತು ಕೇಳಿ ಬಿದ್ದು ಬಿದ್ದು ನಕ್ಕರು. ವೆಂಕಟೇಶ್ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ಈ ಬಗ್ಗೆ ನೀವು ಸಾರ್ವಜನಿಕವಾಗಿ ಕ್ಷಣೆಯಾಚಿಸಬೇಕು ಇಲ್ಲದಿದ್ದರೆ ನೀವು ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com