ಕಿರೀಟಿ ರೆಡ್ಡಿ ನಟನೆಯ 'ಜ್ಯೂನಿಯರ್' ಗೆ ಕಿರಣ್ ಶ್ರೀನಿವಾಸ್ ವಿಲನ್!

ಚಿತ್ರರಂಗದಲ್ಲಿ ಒಂದು ದಶಕವನ್ನು ಪೂರೈಸಿರುವ ನಟ ಮತ್ತೆ ಕನ್ನಡ ಚಿತ್ರಗಳ ಕಡೆ ಮುಖ ಮಾಡಿದ್ದಾರೆ. ಕಿರಣ್ ಶ್ರೀನಿವಾಸ್ ನಟನೆಯ ಮಂಡಲ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಏತನ್ಮಧ್ಯೆ, ಕಿರಣ್ ತನ್ನ ಮುಂದಿನ ಚಿತ್ರದಲ್ಲಿ ಖಳನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಕಿರಣ್ ಶ್ರೀನಿವಾಸ್ ಮತ್ತು ಕಿರೀಟಿ ರೆಡ್ಡಿ
ಕಿರಣ್ ಶ್ರೀನಿವಾಸ್ ಮತ್ತು ಕಿರೀಟಿ ರೆಡ್ಡಿ

ಪ್ರೀತಂ ಗುಬ್ಬಿ ಅವರ ಹಾಗೆ ಸುಮ್ಮನೆ ಚಿತ್ರದ ಮೂಲಕ ಗಮನ ಸೆಳೆದಿದ್ದ ಕಿರಣ್ ಶ್ರೀನಿವಾಸ್ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳನ್ನು ಮಾಡಿದರು. ಸದ್ಯ ಅವರು ಒಂದೆರಡು ವೆಬ್ ಸರಣಿಗಳಲ್ಲಿ ನಟಿಸುವುದರ ಜೊತೆಗೆ ಸ್ಪೋರ್ಟ್ಸ್ ಚಾನೆಲ್‌ಗೆ ಆಂಕರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಚಿತ್ರರಂಗದಲ್ಲಿ ಒಂದು ದಶಕವನ್ನು ಪೂರೈಸಿರುವ ನಟ ಮತ್ತೆ ಕನ್ನಡ ಚಿತ್ರಗಳ ಕಡೆ ಮುಖ ಮಾಡಿದ್ದಾರೆ. ಕಿರಣ್ ಶ್ರೀನಿವಾಸ್ ನಟನೆಯ ಮಂಡಲ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಏತನ್ಮಧ್ಯೆ, ಕಿರಣ್ ತನ್ನ ಮುಂದಿನ ಚಿತ್ರದಲ್ಲಿ ಖಳನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ರಾಧಾಕೃಷ್ಣ ನಿರ್ದೇಶನದ ಜೂನಿಯರ್‌ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜಕಾರಣಿ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ಅವರೊಂದಿಗೆ  ನಟಿಸಲಿದ್ದಾರೆ. ಚಿತ್ರವು ಪ್ರಸ್ತುತ ಶೂಟಿಂಗ್ ಹಂತದಲ್ಲಿದೆ,  ಇದರಲ್ಲಿ ಶ್ರೀಲೀಲಾ ಮಹಿಳಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ರವಿಚಂದ್ರನ್, ಮತ್ತು ಕುಶ್ಬೂ ಜೊತೆಗೆ ಜೆನಿಲಿಯಾ ದೇಶಮುಖ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಶ್ರೀಲೀಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರವಿಚಂದ್ರನ್, ಮತ್ತು ಖುಶ್ಬೂ ಜೊತೆಗೆ ಜೆನಿಲಿಯಾ ದೇಶಮುಖ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾಯಿ ಕೊರಪಾಟಿಯವರ ವಾರಾಹಿ ಚಲನ ಚಿತ್ರ ಬ್ಯಾನರ್‌ನ ಬೆಂಬಲದೊಂದಿಗೆ, ಜೂನಿಯರ್ ಸಿನಿಮಾಗೆ ಬಾಹುಬಲಿ ಖ್ಯಾತಿಯ ಸೆಂಥಿಲ್ ಕುಮಾರ್ ಸಿನಿಮಾಟೋಗ್ರಾಫರ್ ಮಾಡಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮತ್ತು ಸ್ಟಂಟ್ ಕೊರಿಯೋಗ್ರಾಫರ್ ಪೀಟರ್ ಹೆನ್ ಅವರಂತಹ ತಂತ್ರಜ್ಞರು ಜ್ಯೂನಿಯರ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com