ಮದುವೆ ನಂತರ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ವಸಿಷ್ಠ ಸಿಂಹ-ಹರಿಪ್ರಿಯಾ; ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್

ತೆಲುಗಿನ ಎವರು ಚಿತ್ರದ ರೀಮೇಕ್ ಆಗಿರುವ 'ಯದಾ ಯದಾ ಹಿ' ಸಿನಿಮಾ ಒಂದು ಮರ್ಡರ್ ಮಿಸ್ಟರಿ ಎಂದು ಎಂದು ಬಿಂಬಿಸಲಾಗಿದೆ. ಈ ಚಿತ್ರದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ತಮ್ಮ ಮದುವೆಯ ನಂತರ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. 
ಯದಾ ಯದಾ ಹಿ ಚಿತ್ರತಂಡ
ಯದಾ ಯದಾ ಹಿ ಚಿತ್ರತಂಡ
Updated on

ತೆಲುಗಿನ ಎವರು ಚಿತ್ರದ ರೀಮೇಕ್ ಆಗಿರುವ 'ಯದಾ ಯದಾ ಹಿ' ಸಿನಿಮಾ ಒಂದು ಮರ್ಡರ್ ಮಿಸ್ಟರಿ ಎಂದು ಎಂದು ಬಿಂಬಿಸಲಾಗಿದೆ. ಈ ಚಿತ್ರದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರು ತಮ್ಮ ಮದುವೆಯ ನಂತರ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ದಿಗಂತ್ ಕೂಡ ನಟಿಸಿರುವ ಈ ಚಿತ್ರ ಜೂನ್ 2 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಜಾಕ್ ಮಂಜು ಅವರ ಶಾಲಿನಿ ಎಂಟರ್‌ಪ್ರೈಸಸ್ ವಿತರಿಸಲಿರುವ ಯದಾ ಯದಾ ಹಿ ಚಿತ್ರದ ಟ್ರೈಲರ್ ಅನ್ನು ಭಾನುವಾರ ನಡೆದ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ಧ್ವನಿಯನ್ನು ಒಳಗೊಂಡ ಶೀರ್ಷಿಕೆ ಗೀತೆಯನ್ನು ಸಹ ಬಿಡುಗಡೆ ಮಾಡಲಾಯಿತು. ಚಿತ್ರದಲ್ಲಿ ಹಿರಿಯ ನಟ ಅವಿನಾಶ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ತೆಲುಗು ನಿರ್ದೇಶಕ ಅಶೋಕ್ ತೇಜ ಈ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಗೈಸ್ ಅಂಡ್ ಡಾಲ್ಸ್ ಕ್ರಿಯೇಷನ್ಸ್ ಬ್ಯಾನರ್ ಮೂಲಕ ರಾಜೇಶ್ ಅಗರವಾಲ್ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಮುನ್ನಾರ್, ಚಿಕ್ಕಮಗಳೂರು, ಹೈದರಾಬಾದ್, ಕೇರಳ ಮತ್ತು ಬೆಂಗಳೂರಿನಲ್ಲಿ ಸುಮಾರು 55 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಯದಾ ಯದಾ ಹಿ ಅಸಾಧಾರಣ ಚಿತ್ರ ಎಂದು ಕರೆದ ದಿಗಂತ್, 'ನಿರ್ದೇಶಕರು ತೆಲುಗು ಇಂಡಸ್ಟ್ರಿಯಿಂದ ಬಂದವರು ಮತ್ತು ಪ್ರಸಿದ್ಧ ತೆಲುಗು ಕಾದಂಬರಿ 'ಯವಡು'ನಿಂದ ಈ ಪ್ರೇಕ್ಷಕರನ್ನು ಮೆಚ್ಚಿಸುವ ಕಥೆಯನ್ನು ಯಶಸ್ವಿಯಾಗಿ ರಚಿಸಿದ್ದಾರೆ' ಎಂದು ಹೇಳಿದರು. ಚಿತ್ರದಲ್ಲಿ ದಿಗಂತ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದು, ಅವರ ಕುತೂಹಲಕಾರಿ ಪಾತ್ರದಲ್ಲಿ ಬಹು ಪದರಗಳಿವೆ.

ಚಿತ್ರದಲ್ಲಿ ಕೆಲಸ ಮಾಡುವ ಬಗ್ಗೆ ತಮ್ಮ ಉತ್ಸುಕತೆಯನ್ನು ವ್ಯಕ್ತಪಡಿಸಿದ ವಶಿಷ್ಟ ಸಿಂಹ, 'ಚಿತ್ರವು ವೀಕ್ಷಕರನ್ನು ಆಕರ್ಷಕ ಪ್ರಯಾಣಕ್ಕೆ ಕರೆದೊಯ್ಯುತ್ತದೆ. ನಾಗಾರ್ಜುನ ಶರ್ಮಾ ಬರೆದಿರುವ ಶೀರ್ಷಿಕೆ ಗೀತೆಯು ಪಾತ್ರಗಳ ಹೋರಾಟವನ್ನು ಸುಂದರವಾಗಿ ಚಿತ್ರಿಸುತ್ತದೆ. ಚಲನಚಿತ್ರವು ವಿಶಿಷ್ಟವಾದ ಪರಿಕಲ್ಪನೆಯನ್ನು ಹೊಂದಿದೆ ಮತ್ತು ಪ್ರೀತಿ, ವಂಚನೆ ಮತ್ತು ದ್ವೇಷದ ಕೇಂದ್ರ ಕಥಾವಸ್ತುವನ್ನು ಗಡಿಯನ್ನು ಮೀರಿ ಅನ್ವೇಷಿಸುತ್ತದೆ ಎಂದು ಹೇಳಿದರು.

ಈಗಾಗಲೇ ಸಿನಿಮಾ ನೋಡಿದ ಹರಿಪ್ರಿಯಾ ತುಂಬಾ ಉತ್ಸುಕರಾಗಿದ್ದಾರೆ. 'ಸೆಟ್‌ಗಳಲ್ಲಿ ವಸಿಷ್ಠ, ದಿಗಂತ್ ಮತ್ತು ನನ್ನ ನಡುವೆ ಒಂದು ನಿರ್ದಿಷ್ಟ ರೀತಿಯ ಸ್ಪರ್ಧೆಯನ್ನು ಬೆಳೆಸಿಕೊಂಡಿದ್ದೇವೆ. ಕಥೆಯು ಮೂರು ಅಸಾಧಾರಣ ಬುದ್ಧಿವಂತ ಮತ್ತು ಚುರುಕಾದ ವ್ಯಕ್ತಿಗಳ ಸುತ್ತ ಸುತ್ತುತ್ತದೆ. ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಕೂರುವಂತೆ ಮಾಡುತ್ತದೆ' ಎಂದು ಅವರು ವಿವರಿಸುತ್ತಾರೆ.

ನಿರ್ಮಾಪಕ ರಾಜೇಶ್ ಅಗರವಾಲ್ ಅವರು ಈ ಯೋಜನೆಯೊಂದಿಗೆ ಕನ್ನಡಕ್ಕೆ ಕಾಲಿಡುವ ಬಗ್ಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು ಮತ್ತು ಪ್ರೇಕ್ಷಕರ ನೇಟಿವಿಟಿಗೆ ತಕ್ಕಂತೆ ಮಾಡಲು ಮೂಲ ಕಥೆಯಲ್ಲಿ ಸೃಜನಶೀಲ ಬದಲಾವಣೆಗಳನ್ನು ಮಾಡಲಾಗಿದೆ. ಇದರ ಪರಿಣಾಮವಾಗಿ ಹೇಗೆ ಉತ್ತಮ ಬಜೆಟ್‌ನಲ್ಲಿ ಒಳ್ಳೆಯ ಸಿನಿಮಾ ಮಾಡಲಾಗಿದೆ ಎಂಬುದರ ಕುರಿತು ಮಾತನಾಡಿದರು.

ಯದಾ ಯದಾ ಹಿ ಚಿತ್ರಕ್ಕೆ ಶ್ರೀಚರಣ್ ಪಾಕಳ ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದರೆ, ಚಿತ್ರಕ್ಕೆ ಯೋಗಿ ಅವರ ಛಾಯಾಗ್ರಹಣ ಮತ್ತು ಶ್ರೀಕಾಂತ್ ಅವರ ಸಂಕಲನವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com