ಇಂದ್ರಜಿತ್ ಲಂಕೇಶ್ ಅವರು ತಮ್ಮ ಮುಂಬರುವ ನಿರ್ದೇಶನದ ಗೌರಿ ಚಿತ್ರದ ಮೂಲಕ ತಮ್ಮ ಮಗ ಸಮರ್ಜಿತ್ ಅನ್ನು ಸ್ಯಾಂಡಲ್ವುಡ್ಗೆ ಪರಿಚಯಿಸುತ್ತಿದ್ದಾರೆ. ಇದೀಗ ಒಂದು ವೇಳಾಪಟ್ಟಿಯಂತೆ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನೈಜ ಘಟನೆಗಳನ್ನು ಆಧರಿಸಿದ ಈ ಚಿತ್ರದಲ್ಲಿ ರಮಣೀಯ ಬಾಬಾ ಬುಡನ್ ಗಿರಿ ಬೆಟ್ಟಗಳಲ್ಲಿ ಕೆಲವು ಪ್ರಮುಖ ಕ್ಷಣಗಳನ್ನು ನಿರ್ದೇಶಕರು ಸೆರೆಹಿಡಿದಿದ್ದಾರೆ.
2003ರಲ್ಲಿ ಪತ್ರಕರ್ತೆ ಮತ್ತು ಕಾರ್ಯಕರ್ತೆ ದಿವಂಗತ ಗೌರಿ ಲಂಕೇಶ್ ಅವರು ಬಾಬಾ ಬುಡನ್ ಗಿರಿಗೆ ಭೇಟಿ ನೀಡಿದ್ದರು. ತಮ್ಮ ಸಹೋದರಿ ಭೇಟಿ ನೀಡಿದ್ದ ಈ ಸ್ಥಳವು ಇಂದ್ರಜಿತ್ ಲಂಕೇಶ್ ಅವರ ದೃಷ್ಟಿಯಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಕೇವಲ ತನ್ನ ಸಹೋದರಿಯ ಜೀವನದಿಂದ ಪ್ರೇರಿತವಾಗಿಲ್ಲ. ಆದರೆ, ಆಕೆಗೆ ಸಲ್ಲಿಸುವ ಹೃತ್ಪೂರ್ವಕ ಗೌರವವಾಗಿದೆ ಎನ್ನುತ್ತಾರೆ ಇಂದ್ರಜಿತ್.
ಇದೇ ವೇಳೆ, ಗೌರಿ ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ಗಳಿಗೆ ರವಿ ವರ್ಮಾ ನಿರ್ದೇಶನ ಮಾಡಿದ್ದಾರೆ. ಪುಟ್ಟ ಗೌರಿ ಮದುವೆ ಧಾರಾವಾಹಿ ಖ್ಯಾತಿಯ ಸಾನ್ಯಾ ಅಯ್ಯರ್ ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ವುಡ್ ಪ್ರವೇಶಿಸುತ್ತಿದ್ದಾರೆ. ಚಿತ್ರಕ್ಕೆ ಎಜೆ ಶೆಟ್ಟಿ ಅವರ ಛಾಯಾಗ್ರಹಣ, ಜಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಬರ್ಗಿ ಮತ್ತು ಹೊಸಬರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
'ಪ್ರತಿಯೊಬ್ಬ ಸಂಗೀತ ಸಂಯೋಜಕರು ತಮ್ಮ ಪರಿಣಿತಿಯನ್ನು ನಮ್ಮ ಚಿತ್ರಕ್ಕೆ ನೀಡಿದ್ದಾರೆ. ಕವಿರಾಜ್ ಗೀತರಚನೆಕಾರರಾಗಿ, ಹೆಸರಾಂತ ಗಾಯಕರಾದ ಅನನ್ಯ ಭಟ್, ಜಾವೇದ್ ಅಲಿ ಮತ್ತು ಕೈಲಾಶ್ ಖೇರ್ ಅವರು ವಿವಿಧ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಹಿನ್ನೆಲೆ ಸಂಗೀತಕ್ಕಾಗಿ ನಾವು ಇನ್ನೊಬ್ಬ ಸಂಗೀತ ನಿರ್ದೇಶಕರನ್ನು ಸಹ ಕರೆತಂದಿದ್ದೇವೆ' ಎನ್ನುತ್ತಾರೆ ಇಂದ್ರಜಿತ್.
ಇಂದ್ರಜಿತ್ ಅವರು ತಮ್ಮ ಸಿನಿಮಾದ ಆಡಿಯೋ ಹಕ್ಕುಗಳಿಗಾಗಿ ಪಡೆದ ಹೆಚ್ಚಿನ ಬೆಲೆ ಬಗ್ಗೆ ತಮ್ಮ ತೃಪ್ತಿ ವ್ಯಕ್ತಪಡಿಸುತ್ತಾರೆ. ಎಷ್ಟಕ್ಕೆ ಆಡಿಯೋ ಹಕ್ಕು ಮಾರಾಟವಾಗಿದೆ ಎಂಬುದನ್ನು ನಂತರ ಬಹಿರಂಗಪಡಿಸಲು ಯೋಜಿಸಿದ್ದಾರೆ. ಗೌರಿ ಸಿನಿಮಾದ ಹಾಡುಗಳು ನಿಸ್ಸಂದೇಹವಾಗಿ ತಮ್ಮ ನಿರ್ದೇಶನದ ವೃತ್ತಿಜೀವನದ ಅತ್ಯುತ್ತಮ ಆಲ್ಬಂಗಳಲ್ಲಿ ಒಂದಾಗಿ ನಿಲ್ಲುತ್ತವೆ ಎಂದು ಅವರು ವಿಶ್ವಾಸದಿಂದ ಹೇಳುತ್ತಾರೆ.
Advertisement