ಬೆಂಗಳೂರು: ನಟ ದರ್ಶನ್ ಗೆ ಮತ್ತೊಂದು ಸಂಕಷ್ಟ; ಚಾಲೆಂಜಿಂಗ್ ಸ್ಟಾರ್ ವಿರುದ್ಧ ಆರ್ ಆರ್ ನಗರ ಠಾಣೆಯಲ್ಲಿ ಎಫ್ ಐಆರ್!

ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ವಿರುದ್ಧ ನಾಯಿ ಕಚ್ಚಿಸಿದ ಆರೋಪ ಹಿನ್ನೆಲೆ ಎಫ್ಐಆರ್‌ ದಾಖಲಾಗಿದೆ. ದರ್ಶನ್ ಮನೆಯ  ಸಾಕು ನಾಯಿಗಳು ಮಹಿಳೆಯೋರ್ವರ ಮೇಲೆ ದಾಳಿ ನಡೆಸಿ ಘಾಸಿಗೊಳಿಸಿರುವ ಹಿನ್ನೆಲೆ ದರ್ಶನ್ ವಿರುದ್ಧ ಎಫ್.ಐ.ಆರ್‌ ದಾಖಲಾಗಿದೆ.
ದರ್ಶನ್
ದರ್ಶನ್

ಬೆಂಗಳೂರು: ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ವಿರುದ್ಧ ನಾಯಿ ಕಚ್ಚಿಸಿದ ಆರೋಪ ಹಿನ್ನೆಲೆ ಎಫ್ಐಆರ್‌ ದಾಖಲಾಗಿದೆ. ದರ್ಶನ್ ಮನೆಯ  ಸಾಕು ನಾಯಿಗಳು ಮಹಿಳೆಯೋರ್ವರ ಮೇಲೆ ದಾಳಿ ನಡೆಸಿ ಘಾಸಿಗೊಳಿಸಿರುವ ಹಿನ್ನೆಲೆ ದರ್ಶನ್ ವಿರುದ್ಧ ಎಫ್.ಐ.ಆರ್‌ ದಾಖಲಾಗಿದೆ.

ಆರ್​ಆರ್ ನಗರದ ನಿವಾಸದ ಬಳಿ ಘಟನೆ ನಡೆದಿದೆ, ವೈದ್ಯೆ ಅಮಿತಾ ಜಿಂದಾಲ್ ಎಂಬುವರರು ಆರ್ ಆರ್‌ನಗರ ಠಾಣೆಯಲ್ಲಿ ದೂರು‌ ದಾಖಲಿಸಿದ್ದಾರೆ. ಇದೇ ತಿಂಗಳ 28 ರಂದು ದೂರುದಾರ ಅಮಿತಾ ಖಾಸಗಿ ಆಸ್ಪತ್ರೆಯ ಕಾರ್ಯಕ್ರಮದ ನಿಮಿತ್ತ ದರ್ಶನ್ ಮನೆ ಬಳಿ ತೆರಳಿದ್ದರು. ಇದೇ ವೇಳೆ ತಮ್ಮ ಕಾರನ್ನು ದರ್ಶನ್ ಮನೆ ಬಳಿ ಪಾರ್ಕಿಂಗ್ ಮಾಡಿದ್ದರು.ಕಾರ್ಯಕ್ರಮ ಮುಗಿಸಿ ಕಾರು ವಾಪಸ್ ತೆಗೆದುಕೊಳ್ಶಲು ಹೋದಾಗ ದರ್ಶನ್ ಮನೆಯ ಸಾಕು ನಾಯಿ ನೋಡಿಕೊಳ್ಳುತ್ತಿದ್ದ ಮನೆ ಕೆಲಸದವರು ಬೇಕಂತಲೇ ಪಾರ್ಕಿಂಗ್ ವಿಚಾರಕ್ಕೆ ವೈದ್ಯರ ಬಳಿ ಕಿರಿಕ್‌ ತೆಗೆದಿದ್ದಾರೆ ಎನ್ನಲಾಗಿದೆ.

ಕಾರು ತೆಗೆದುಳಕೊಳ್ಳಬೇಕು ನಾಯಿಯನ್ನ ಬೇರೆಡೆ ಕರೆದುಕೊಂಡು ಹೋಗುವಂತೆ ಹೇಳಿದ್ದರಂತೆ. ಈ ಸಂಬಂಧ ಇಬ್ಬರ ನಡುವೆ ವಾಗ್ವಾದ ನಡೆಯುವ ವೇಳೆ ಎರಡು ನಾಯಿ ವೈದ್ಯೆಯ ಮೇಲೆ ಜಿಗಿದು ಕಚ್ಚಿರುವ ಆರೋಪ ಕೇಳಿ ಬಂದಿದೆ. ಅಮಿತಾ ಅವರ ಬಟ್ಟೆ ಹರಿದಿದ್ದು ನಾಯಿ ಅವರ ಹೊಟ್ಟೆಯ ಭಾಗಕ್ಕೆ ಕಚ್ಚಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ನಾಯಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಹಾಗೂ ಎರಡನೇ ಆರೋಪಿಯಾಗಿ ದರ್ಶನ್ ವಿರುದ್ದ ವೈದ್ಯರು ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com